Pradeep Eshwar: ರಾಜಕೀಯ ನಾಯಕತ್ವಕ್ಕೆ ಹೊಸ ವ್ಯಾಖ್ಯಾನ ನೀಡುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್

ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಮತ್ತು ಸಂಚಲನ ಮೂಡಿಸಿರುವ 38ರ ಯುವಕ ಪ್ರದೀಪ್, ಅಧಿಕಾರಿಗಳೊಂದಿಗೆ ಕ್ಷೆತ್ರದಲ್ಲಿ ಸುತ್ತುತ್ತ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ.

Pradeep Eshwar: ರಾಜಕೀಯ ನಾಯಕತ್ವಕ್ಕೆ ಹೊಸ ವ್ಯಾಖ್ಯಾನ ನೀಡುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್
|

Updated on:May 18, 2023 | 11:04 AM

ಚಿಕ್ಕಬಳ್ಳಾಪುರ:  ರಾಜಕೀಯ ಕ್ಷೇತ್ರಕ್ಕೆ ತೀರ ಹೊಸಬ, ದೈತ್ಯಸಂಹಾರಿ ಪ್ರದೀಪ್ ಈಶ್ವರ್ (Pradeep Eshwar) ರಾಜಕೀಯಕ್ಕೆ, ರಾಜಕೀಯ ಧುರೀಣತ್ವಕ್ಕೆ ಹೊಸ ಭಾಷ್ಯ ಬರೆಯುವ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯ ವಿಧಾನಸಭಾ ಚುನಾವಣೆ (assembly polls) ಫಲಿತಾಂಶ ಪ್ರಕಟವಾಗಿ ಇಂದಿಗೆ ಕೇವಲ 5 ನೇ ದಿನ. ಆದರೆ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಹೆವಿವೇಟ್ ಅನಿಸಿದ್ದ ಮಾಜಿ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರನ್ನು ಸ್ಟಾರ್ ಪ್ರಚಾರಕರ ನೆರವಿಲ್ಲದೆ ಸೋಲಿಸಿ ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಮತ್ತು ಸಂಚಲನ ಮೂಡಿಸಿರುವ 38ರ ಯುವಕ ಪ್ರದೀಪ್, ಆಗಲೇ ಅಧಿಕಾರಿಗಳೊಂದಿಗೆ ಕ್ಷೆತ್ರದಲ್ಲಿ ಸುತ್ತುತ್ತ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಹಿಂದೂ-ಮುಸಲ್ಮಾನರೆನ್ನದೆ ಎಲ್ಲರ ಮನೆಗಳಿಗೆ ಭೇಟಿ ನೋಡಿ ಅವರ ಕಷ್ಟ ಸುಖಗಳನ್ನು ಆಲಿಸುತ್ತಿದ್ದಾರೆ. ಅಸಲು ರಾಜಕೀಯ ನಾಯಕತ್ವ ಅಂದರೆ ಇದೇ ಅಲ್ಲವೇ? ಪ್ರದೀಪ್ ಈಶ್ವರ್ ನಮ್ಮೆಲ್ಲರ ಅಭಿನಂದನೆಗೆ ಅರ್ಹರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:34 am, Thu, 18 May 23

Follow us