Pradeep Eshwar: ನನಗೆ ಸಚಿವ ಸ್ಥಾನ ಬೇಡ, ಡಾ ಎಮ್ ಸಿ ಸುಧಾಕರ್ ಗೆ ಸಿಕ್ಕರೆ ಸಾಕು ಎಂದಿದ್ದ ಪ್ರದೀಪ್ ಈಶ್ವರ್ ರಾಜಭವನದ ಬಳಿ ಹೇಳಿದ್ದೇನು?

|

Updated on: May 27, 2023 | 12:23 PM

ಚಿಂತಾಮಣಿ ಶಾಸಕ ಡಾ ಎಮ್ ಸಿ ಸುಧಾಕರ್ ಅವರಿಗೆ ಸಚಿವ ಸ್ಥಾನ ಸಿಕ್ಕರೆ ತನಗೆ ಬಹಳ ಖುಷಿಯಾಗುತ್ತದೆ ಅಂತ ಪ್ರದೀಪ್ ಹೇಳಿದ್ದರು.

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಾಜ್ಯ ರಾಜಕೀಯ ವಲಯ ಅಗ್ರಗಣ್ಯ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದ ಡಾ ಕೆ ಸುಧಾಕರ್ (Dr K Sudhakar) ಅವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿರುವ ಯುವ ಕಾಂಗ್ರೆಸ್ ನಾಯಕ ಪ್ರದೀಪ್ ಈಶ್ವರ್ (Pradeep Eshwar) ತನಗೆ ಸಚಿವನಾಗುವ ಆಸೆ ಇಲ್ಲ, ಶಾಸಕನಾಗೇ ಜನರ ಸೇವೆ ಮಾಡುವುದಾಗಿ ಹೇಳಿದ್ದರು. ತನಗಿಂತ ಹಿರಿಯರು ಸಾಕಷ್ಟು ನಾಯಕರಿದ್ದಾರೆ, ನ್ಯಾಯಯುತವಾಗಿ ಅವರಿಗೆ ಅವಕಾಶ ಸಿಗಬೇಕು ಎಂದು ಹೇಳಿದ್ದ ಪ್ರದೀಪ್, ಚಿಂತಾಮಣಿ ಶಾಸಕ ಡಾ ಎಮ್ ಸಿ ಸುಧಾಕರ್ (Dr MC Sudhakar) ಅವರಿಗೆ ಸಚಿವ ಸ್ಥಾನ ಸಿಕ್ಕರೆ ತನಗೆ ಬಹಳ ಖುಷಿಯಾಗುತ್ತದೆ ಅಂದಿದ್ದರು. ಅವರ ಆಸೆ ಈಡೇರಿದೆ ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಸಚಿವರಾಗಿ ಆಯ್ಕೆಯಾದವರಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on