ಅನ್ನಭಾಗ್ಯ ಅಕ್ಕಿ ದುಡ್ಡು ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಸಿಎಂ ಏನ್ ಹೇಳಿದ್ರು ಗೊತ್ತಾ?

Edited By: ಕಿರಣ್ ಹನುಮಂತ್​ ಮಾದಾರ್

Updated on: Jul 01, 2023 | 1:55 PM

ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದಿದ್ದ ಸರ್ಕಾರ. ಇದೀಗ ಅಕ್ಕಿ ಸಿಗದ ಕಾರಣ, ಅಕೌಂಟ್​ಗೆ ಹಣ ಹಾಕಲು ನಿರ್ಧರಿಸಿದ್ದು, ಅನ್ನಭಾಗ್ಯ ಅಕ್ಕಿ ದುಡ್ಡು ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯನವರು ಉತ್ತರಿಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್​(Congress) ಪಕ್ಷ ನೀಡಿದ್ದ 5 ಗ್ಯಾರಂಟಿಗಳಲ್ಲಿ ಜನರಿಗೆ ಒಂದೊಂದಾಗಿ ಈಡೇರಿಸುತ್ತಿದೆ. ಅದರಂತೆ ಅನ್ನಭಾಗ್ಯ (Annabhagya)  ಯೋಜನೆಯಡಿ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದಿದ್ದ ಸರ್ಕಾರ. ಇದೀಗ ಅಕ್ಕಿ ಸಿಗದ ಕಾರಣ, ಅಕೌಂಟ್​ಗೆ ಹಣ ಹಾಕಲು ನಿರ್ಧರಿಸಿದೆ. ಈ ಕುರಿತು ರಾಜ್ಯಾದ್ಯಂತ ಪರ ವಿರೋಧಗಳು ಕೇಳಿ ಬರುತ್ತಿದ್ದು. ಇದೀಗ ಅನ್ನಭಾಗ್ಯ ಹಣ ಯಾವಾಗ ಅಕೌಂಟಿಗೆ ಬರುತ್ತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ(Siddaramaiah)ನವರು ‘ಈ ತಿಂಗಳಿನಿಂದಲೇ ಹಣ ಹಾಕುತ್ತೇವೆ ಎಂದಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us