Anna Bhagya Scheme: ಅಕ್ಕಿ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Jul 11, 2023 | 11:20 AM

ಇದು ಕರ್ನಾಟಕದ ಜನತೆ ವಿರುದ್ಧ ದ್ವೇಷದ ರಾಜಕಾರಣ ಅಲ್ಲದೆ ಬೇರೇನೂ ಅಲ್ಲ ಎಂದು ಸಿದ್ದರಾಮಯ್ಯ ತಮ್ಮ ಅಸಮಾಧಾನ ಹೊರಹಾಕಿದ್ದಾರೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮ್ಮ ಅನ್ನಭಾಗ್ಯ ಯೋಜನೆಗೆ (Anna Bhagya scheme) ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಟ್ವೀಟ್ ಮೂಲಕ ಮುಖ್ಯಮಂತ್ರಿ ತಮ್ಮ ಅಸಮಾಧಾನ, ಕೋಪ-ತಾಪ, ಹತಾಷೆಯನ್ನು ಹೊರಹಾಕಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದಿಂದ ಅಕ್ಕಿ (rice) ಖರೀದಿಸಲು ಮುಂದಾದಾಗ ಕೊಡೋದಿಲ್ಲ ಅಂತ ನಮ್ಮನ್ನು ಬರಿಗೈಲಿ ವಾಪಸ್ಸು ಕಳಿಸಲಾಯಿತು. ಅದೇ ಅಕ್ಕಿಯನ್ನು ಈ-ಆಕ್ಷನ್ ಮೂಲಕ ಕೇಂದ್ರ ಸರ್ಕಾರ ಮಾರಲು ಅಣಿಯಾದಾಗ ಒಂದೇ ಒಂದು ರಾಜ್ಯ ಖರೀದಿಸಲು ಮುಂದೆ ಬಂದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ಡರ್ಟಿ ಪಾಲಿಟಿಕ್ಸ್ ಅಲ್ಲದೆ ಮತ್ತೇನು ಅಂತ ಕರೆಯಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ಹೇಳಿದ್ದಾರೆ. ಇದು ಕರ್ನಾಟಕದ ಜನತೆ ವಿರುದ್ಧ ದ್ವೇಷದ ರಾಜಕಾರಣ ಅಲ್ಲದೆ ಬೇರೇನೂ ಅಲ್ಲ ಎಂದು ಸಿದ್ದರಾಮಯ್ಯ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on