ಚಾಮರಾಜನಗರ ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಕುಮಾರ್ ಮನೆಯಲ್ಲೀಗ ಸೂತಕ!
ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ಎನ್ಕೌಂಟರ್ನಲ್ಲಿ ಕುಮಾರ್ ಸಾವನ್ನಪ್ಪಿದ್ದು, ಅವರ ಹೊಸ ಮನೆ ಗೃಹಪ್ರವೇಶದ ಸಂಭ್ರಮ ಶ್ರಾದ್ಧ ಕಾರ್ಯವಾಗಿ ಬದಲಾಗಿದೆ. ಮನೆಯವರು ನಕಲಿ ಎನ್ಕೌಂಟರ್ ಆರೋಪ ಮಾಡಿದ್ದು, ಮೃತರಾದ ಮೂವರ ಕುಟುಂಬಗಳೂ ನ್ಯಾಯಕ್ಕೆ ಆಗ್ರಹಿಸುತ್ತಿವೆ. ಈ ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸಲು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ.
ಚಾಮರಾಜನಗರ, ಆಗಸ್ಟ್ 21: ಹನೂರು ಬಳಿ ನಡೆದ ಅರಣ್ಯ ಇಲಾಖೆ ಎನ್ಕೌಂಟರ್ನಲ್ಲಿ ಕುಮಾರ್, ಆಂಟೋನಿಸ್ವಾಮಿ ಹಾಗೂ ಪೀಟರ್ ಎಂಬ ಮೂವರು ಬಲಿಯಾಗಿದ್ದಾರೆ. ಈ ಪೈಕಿ ಕುಮಾರ್ ಅವರ ಮನೆ ಗೃಹಪ್ರವೇಶ ಇಂದು (ಆಗಸ್ಟ್ 21) ನಿಗದಿಯಾಗಿತ್ತು. ಆದರೆ, ಘಟನೆ ನಡೆದ ನಂತರ ಗೃಹಪ್ರವೇಶದ ಬದಲು ಕುಟುಂಬಸ್ಥರು ಶ್ರಾದ್ಧ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಕೇರಳದಲ್ಲಿ ಹಿಟಾಚಿ ಆಪರೇಟರ್ ಆಗಿದ್ದ ಕುಮಾರ್, ಮೂಲತಃ ಚಾಮರಾಜನಗರದವರಾಗಿದ್ದು, ಆಗಾಗ ಊರಿಗೆ ಬರುತ್ತಿದ್ದರು. ಮೃತರ ಕುಟುಂಬಸ್ಥರು ಈ ಎನ್ಕೌಂಟರ್ ನಕಲಿ ಎಂದು ಆರೋಪಿಸಿದ್ದು, ಅರಣ್ಯ ಅಧಿಕಾರಿಗಳೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ದೂರಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಕೊಳ್ಳೇಗಾಲ ಎಸಿ ನೇತೃತ್ವದಲ್ಲಿ ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
