AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಕುಮಾರ್​​ ಮನೆಯಲ್ಲೀಗ ಸೂತಕ!

ಚಾಮರಾಜನಗರ ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಕುಮಾರ್​​ ಮನೆಯಲ್ಲೀಗ ಸೂತಕ!

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Aug 21, 2026 | 11:27 AM

Share

ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ಎನ್​ಕೌಂಟರ್​​ನಲ್ಲಿ ಕುಮಾರ್ ಸಾವನ್ನಪ್ಪಿದ್ದು, ಅವರ ಹೊಸ ಮನೆ ಗೃಹಪ್ರವೇಶದ ಸಂಭ್ರಮ ಶ್ರಾದ್ಧ ಕಾರ್ಯವಾಗಿ ಬದಲಾಗಿದೆ. ಮನೆಯವರು ನಕಲಿ ಎನ್​ಕೌಂಟರ್ ಆರೋಪ ಮಾಡಿದ್ದು, ಮೃತರಾದ ಮೂವರ ಕುಟುಂಬಗಳೂ ನ್ಯಾಯಕ್ಕೆ ಆಗ್ರಹಿಸುತ್ತಿವೆ. ಈ ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸಲು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ.

ಚಾಮರಾಜನಗರ, ಆಗಸ್ಟ್​​ 21: ಹನೂರು ಬಳಿ ನಡೆದ ಅರಣ್ಯ ಇಲಾಖೆ ಎನ್​ಕೌಂಟರ್​ನಲ್ಲಿ ಕುಮಾರ್, ಆಂಟೋನಿಸ್ವಾಮಿ ಹಾಗೂ ಪೀಟರ್ ಎಂಬ ಮೂವರು ಬಲಿಯಾಗಿದ್ದಾರೆ. ಈ ಪೈಕಿ ಕುಮಾರ್ ಅವರ ಮನೆ ಗೃಹಪ್ರವೇಶ ಇಂದು (ಆಗಸ್ಟ್​​ 21) ನಿಗದಿಯಾಗಿತ್ತು. ಆದರೆ, ಘಟನೆ ನಡೆದ ನಂತರ ಗೃಹಪ್ರವೇಶದ ಬದಲು ಕುಟುಂಬಸ್ಥರು ಶ್ರಾದ್ಧ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಕೇರಳದಲ್ಲಿ ಹಿಟಾಚಿ ಆಪರೇಟರ್ ಆಗಿದ್ದ ಕುಮಾರ್, ಮೂಲತಃ ಚಾಮರಾಜನಗರದವರಾಗಿದ್ದು, ಆಗಾಗ ಊರಿಗೆ ಬರುತ್ತಿದ್ದರು. ಮೃತರ ಕುಟುಂಬಸ್ಥರು ಈ ಎನ್​ಕೌಂಟರ್ ನಕಲಿ ಎಂದು ಆರೋಪಿಸಿದ್ದು, ಅರಣ್ಯ ಅಧಿಕಾರಿಗಳೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ದೂರಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಕೊಳ್ಳೇಗಾಲ ಎಸಿ ನೇತೃತ್ವದಲ್ಲಿ ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

 

Follow Us