ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿ ಹೊರಬಂದ ಗೋವಿಂದ ಬಾಬು ಮಾಧ್ಯಮದವರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲ

|

Updated on: Sep 14, 2023 | 7:17 PM

ತನಿಖೆ ನಡೆಯುತ್ತಿದೆ, ಅದು ಮುಗಿದ ಬಳಿಕ ಎಲ್ಲವನ್ನು ಹೇಳುತ್ತೇನೆ, ದಯವಿಟ್ಟು ಸಹಕರಿಸಿ ಎಂದು ಅವರು ಪತ್ರಕರ್ತರಿಗೆ ಹೇಳಿದರು. ರಾಜಕಾರಣಿಗಳ ವಿಷಯವೇನಾದರೂ ಚೈತ್ರಾ ಬಾಯಿ ಬಿಟ್ಟಿದ್ದಾರಾ? ಯಾರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಅಂತ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

ಬೆಂಗಳೂರು: ಚೈತ್ರಾ ಕುಂದಾಪುರಳಿಂದ (Chiatra Kundapura) ತನಗೆ ಭಾರೀ ಪ್ರಮಾಣದಲ್ಲಿ ವಂಚನೆಯಾಗಿದೆ ಎಂದು ದೂರು  ಸಲ್ಲಿಸಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Pujari) ಇಂದು ಮಧ್ಯಾಹ್ನ ಬೆಂಗಳೂರಿನ ಸಿಸಿಬಿ ಅಧಿಕಾರಿಗಳ (CCB Sleuths) ಮುಂದೆ ವಿಚಾರಣೆಗೆ ಹಾಜರಾದರು. ವಿಚಾರಣೆಯ ಬಳಿಕ ಹೊರಬಂದ ಅವರನ್ನು ಮಾಧ್ಯಮ ಪ್ರತಿನಿಧಿಗಳು ಸುತ್ತುವರಿದಾಗ ಗಾಬರಿಗೊಳಗಾದರು. ಈ ಪ್ರಕರಣ ಮತ್ತು ಇಂದಿರಾ ಕ್ಯಾಂಟೀನ್ ನಡುವೆ ಯಾವುದೇ ಸಂಬಂಧವಿಲ್ಲ, ತನ್ನ ಬಿಸಿನೆಸ್ ಗೆ ಸಂಬಂಧಿಸಿದಂತೆ ವಂಚನೆಯಾಗಿದೆ ಎಂದು ಅವರು ಹೇಳಿದರು. ಚೈತ್ರಾ ಪರಿಚಯವಾಗಿದ್ದು ಹೇಗೆ, ವಂಚನೆಗೊಳಗಾಗಿದ್ದು ಯಾವಾಗ ಗೊತ್ತಾಯಿತು ಮೊದಲಾದ ಪ್ರಶ್ನೆಗಳಿಗೆ ಪೂಜಾರಿ ಉತ್ತರ ನೀಡಲಿಲ್ಲ. ತನಿಖೆ ನಡೆಯುತ್ತಿದೆ, ಅದು ಮುಗಿದ ಬಳಿಕ ಎಲ್ಲವನ್ನು ಹೇಳುತ್ತೇನೆ, ದಯವಿಟ್ಟು ಸಹಕರಿಸಿ ಎಂದು ಅವರು ಪತ್ರಕರ್ತರಿಗೆ ಹೇಳಿದರು. ರಾಜಕಾರಣಿಗಳ ವಿಷಯವೇನಾದರೂ ಚೈತ್ರಾ ಬಾಯಿ ಬಿಟ್ಟಿದ್ದಾರಾ? ಯಾರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಅಂತ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on