AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಉತ್ತರಾಧಿಕಾರಿ' ಹೇಳಿಕೆ ವಿವಾದ: ಯತೀಂದ್ರಗೆ ಟಾಂಗ್​ ಕೊಟ್ಟ ಶಾಸಕ ರಂಗನಾಥ್​

‘ಉತ್ತರಾಧಿಕಾರಿ’ ಹೇಳಿಕೆ ವಿವಾದ: ಯತೀಂದ್ರಗೆ ಟಾಂಗ್​ ಕೊಟ್ಟ ಶಾಸಕ ರಂಗನಾಥ್​

ಪ್ರಸನ್ನ ಹೆಗಡೆ
|

Updated on:Oct 24, 2025 | 11:42 AM

Share

ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಸತೀಶ್​ ಜಾರಕಿಹೊಳಿ ಎಂಬ ಪರಿಷತ್​ ಸದಸ್ಯ ಡಾ. ಯತೀಂದ್ರ ಹೇಳಿಕೆಗೆ ಶಾಸಕ ಕುಣಿಗಲ್ ರಂಗನಾಥ್ ಟಾಂಗ್​ ಕೊಟ್ಟಿದ್ದಾರೆ. ಜನ ಆಶೀರ್ವಾದ ಮಾಡಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಅದು ಬಿಟ್ಟು ಗೊಂದಲ ಸೃಷ್ಟಿ ಮಾಡಬಾರದು ಎಂದಿದ್ದಾರೆ.

ಬೆಂಗಳೂರು, ಅಕ್ಟೋಬರ್​ 24: ಸಿಎಂ ಸಿದ್ದರಾಮಯ್ಯ (Siddaramaiah) ಅವರ ಉತ್ತರಾಧಿಕಾರಿ ಸತೀಶ್​ ಜಾರಕಿಹೊಳಿ ಎಂಬ ಪರಿಷತ್​ ಸದಸ್ಯ ಯತೀಂದ್ರ ಹೇಳಿಕೆ ಕಾಂಗ್ರೆಸ್​ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲೂ ಡಿಸಿಎಂ ಡಿಕೆಶಿ ಬೆಂಬಲಿಗ ಶಾಸಕರು ಗರಂ ಆಗಿದ್ದಾರೆ. ಸಿಎಂ ಪುತ್ರನ ಹೇಳಿಕೆ ವಿರುದ್ಧ ನಿನ್ನೆಯಷ್ಟೇ ರಾಮನಗರ ಶಾಸಕ ಇಕ್ಬಾಲ್​ ಹುಸೇನ್​ ಕಿಡಿ ಕಾರಿದ್ದರು. ಶಾಸಕ ಕುಣಿಗಲ್ ರಂಗನಾಥ್ ಕೂಡ ಇದೇ ವಿಚಾರವಾಗಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯತೀಂದ್ರಗೆ ಯಾಕೆ ನೊಟೀಸ್​ ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಪಕ್ಷದ ತೀರ್ಮಾನ. ಜನ ಆಶೀರ್ವಾದ ಮಾಡಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು.  ಅದು ಬಿಟ್ಟು ಗೊಂದಲ ಸೃಷ್ಟಿ ಮಾಡಬಾರದು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 24, 2025 11:31 AM