ಸಂಸದ ತೇಜಸ್ವಿ ಸೂರ್ಯಗೆ ಮಸಾಲೆ ದೋಸೆ ಪಾರ್ಸೆಲ್ ಕಳಿಸಿದ ಕಾಂಗ್ರೆಸ್ ಕಾರ್ಯಕರ್ತರು!
ಕಾರ್ಯಕರ್ತರು ನಗರದ ಖ್ಯಾತ ಹೊಟೆಲ್ ಗಳಿಂದ ಮಸಾಲೆ ದೋಸೆ, ಪೇಪರ್ ದೋಸೆ, ಬೆಣ್ಣೆ ದೋಸೆ ಮೊದಲಾದವುಗಳನ್ನು ತರಿಸಿ ಆಹಾರ ಡೆಲಿವರಿ ಮಾಡುವ ಡುನ್ಜೋ ಸಂಸ್ಥೆಯ ಮೂಲಕ ಸಂಸದರಿಗೆ ಪಾರ್ಸೆಲ್ ಕಳಿಸಿದ್ದಾರೆ.
ಬೆಂಗಳೂರು: ತಮ್ಮ ಕ್ಷೇತ್ರದಲ್ಲಿ ಜನ ನೆರೆಯಿಂದ ತತ್ತರಿಸಿದರೂ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೋಟೆಲೊಂದರಲ್ಲಿ ಮಸಾಲೆ ದೋಸೆ (Masale Dose) ತಿನ್ನುತ್ತಾ ಕುಳಿತಿದ್ದರು ಎಂದು ಹೇಳಿರುವ ಕಾಂಗ್ರೆಸ್ ಕಾರ್ಯಕರ್ತರು (Congress workers) ಶನಿವಾರ ಬೆಂಗಳೂರಲ್ಲಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು. ಕಾರ್ಯಕರ್ತರು ನಗರದ ಖ್ಯಾತ ಹೊಟೆಲ್ ಗಳಿಂದ ಮಸಾಲೆ ದೋಸೆ, ಪೇಪರ್ ದೋಸೆ, ಬೆಣ್ಣೆ ದೋಸೆ ಮೊದಲಾದವುಗಳನ್ನು ತರಿಸಿ ಆಹಾರ ಡೆಲಿವರಿ ಮಾಡುವ ಡುನ್ಜೋ ಸಂಸ್ಥೆಯ ಮೂಲಕ ಸಂಸದರಿಗೆ ಪಾರ್ಸೆಲ್ ಕಳಿಸಿದ್ದಾರೆ. ಕಳಿಸುವಾಗ ಒಬ್ಬ ಕಾರ್ಯಕರ್ತ ತೇಜಸ್ವಿಗೆ ಫೋನ್ ಮಾಡಿ ಪಾರ್ಸೆಲ್ ಕಳಿಸುತ್ತಿರುವ ಸಂಗತಿ ತಿಳಿಸುತ್ತಾರೆ.
Loading...
Unable to load recommendations.
Follow Us
