Lokayukta Raid: ಲಂಚಕೋರ ಆಹಾರ ನಿರೀಕ್ಷಕನೊಬ್ಬ ಪರಾರಿಯಾಗಿ ಸಿಕ್ಕಿಬೀಳುವ ಮೊದಲು ಲೋಕಾಯುಕ್ತ ಅಧಿಕಾರಿಗಳನ್ನು ಕೊಲ್ಲುವ ಯತ್ನ ಮಾಡಿದ!

ಅರುಣ್​ ಕುಮಾರ್​ ಬೆಳ್ಳಿ

Updated on: Jul 15, 2023 | 12:13 PM

ಲೋಕಾಯುಕ್ತ ಅಧಿಕಾರಿಗಳ ವಾಹನದ ಮೇಲೆ ತನ್ನ ಕಾರು ಹತ್ತಿಸಿ ಅವರನ್ನು ಕೊಲ್ಲುವ ಪ್ರಯತ್ನ ಕೂಡ ಮಹಾಂತೇಗೌಡ ಮಾಡಿದ್ದಾನೆ

ಬೆಂಗಳೂರು: ಆಹಾರ ನಿರೀಕ್ಷಕರು ಕುಬೇರರು ಅನ್ನೋದು ಸುಳ್ಳಲ್ಲ, ಯಾಕೆ ಅಂತ ಎಲ್ಲರಿಗೂ ಗೊತ್ತಿರುವ ಸಂಗತಿ. ನಗರದ ಕೆಜಿ ಸರ್ಕಲ್ ನಲ್ಲಿ ಆಹಾರ ನಿರೀಕ್ಷಕನಾಗಿ (food inspector) ಕೆಲಸ ಮಾಡುವ ಮಹಾಂತೇಗೌಡ (Mahanth Gowda) ಶುಕ್ರವಾರದಂದು ಟ್ರೇಡ್ ಲೈಸೆನ್ಸ್ ಮಾಡಿಕೊಡಲು ರಂಗಧಾಮಯ್ಯ ಹೆಸರಿನ ವ್ಯಕ್ತಿಯಿಂದ ರೂ. 43,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ (Lokayukta Sleuths) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಒಂದು ಸಿನಿಮೀಯ ಘಟನೆ ಬಳಿಕ ಮಹಾಂತೇಗೌಡನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಸಲಿಗೆ ಆಗಿದ್ದೇನೆಂದರೆ, ಲೋಕಾಯುಕ್ತ ಅಧಿಕಾರಿಗಳನ್ನು ಕಂಡಾಕ್ಷಣ ಮಹಾಂತೇಗೌಡ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ. ಅವನನ್ನು 15 ಕಿಮೀವರೆಗೆ ಹಿಂದಟ್ಟಿದ ಲೋಕಾಯುಕ್ತ ಪೊಲೀಸ್ ನೆಲಮಂಗಲದ ಸೊಂಡೆಕೊಪ್ಪ ಎಂಬಲ್ಲಿ ಅಡ್ಡಹಾಕಿ ಹಿಡಿದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ವಾಹನದ ಮೇಲೆ ತನ್ನ ಕಾರು ಹತ್ತಿಸಿ ಅವರನ್ನು ಕೊಲ್ಲುವ ಪ್ರಯತ್ನ ಕೂಡ ಮಹಾಂತೇಗೌಡ ಮಾಡಿದ್ದಾನೆ. ಹಾಗಾಗಿ ಅವನ ವಿರುದ್ಧ ಕೊಲೆಯತ್ನದ ಕೇಸ್ ಕೂಡ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಹಾಂತಗೌಡನಿಗೆ ಉಳಿಗಾಲವಿದ್ದಂತಿಲ್ಲ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.