Daily Devotional: ಉಪ್ಪನ್ನ ಈ ಸಮಯದಲ್ಲಿ ಕೊಟ್ಟರೆ ಕಷ್ಟಗಳು ಕಟ್ಟಿಟ್ಟ ಬುತ್ತಿ

Updated on: Apr 21, 2025 | 7:05 AM

ಉಪ್ಪು ಮಹಾಲಕ್ಷ್ಮೀಯ ಪ್ರತೀಕವಾಗಿದೆ. ಮನೆಯಲ್ಲಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಉಪ್ಪನ್ನು ಕೈಗೆ ನೇರವಾಗಿ ಕೊಡಬಾರದು ಮತ್ತು ನೆಲದ ಮೇಲೆ ಬಿದ್ದ ಉಪ್ಪನ್ನು ಪೊರಕೆಯಿಂದ ಗುಡಿಸಬಾರದು. ಉಪ್ಪಿನ ಋಣವನ್ನು ಪೂರ್ಣಗೊಳಿಸುವುದು ಮುಖ್ಯ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಏಪ್ರಿಲ್​ 21: ಹಿಂದೂ ಸಂಪ್ರದಾಯದಲ್ಲಿ ಉಪ್ಪಿಗೆ ಪವಿತ್ರ ಸ್ಥಾನವಿದೆ. ಸಮುದ್ರ ಮಥನದಿಂದ ಉಪ್ಪು ಉತ್ಪತ್ತಿಯಾಯಿ ಎನ್ನಲಾಗುತ್ತದೆ. ಉಪ್ಪನ್ನು ಲಕ್ಷ್ಮೀಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಖಾಲಿ ಆದರೆ ಲಕ್ಷ್ಮೀ ದೇವಿಯ ಅನುಗ್ರಹ ಕಡಿಮೆಯಾಗುತ್ತದೆ ಎಂಬ ನಂಬಿಕೆ. ಉಪ್ಪನ್ನು ಕೈಗೆ ನೇರವಾಗಿ ಕೊಡುವುದು ಅಥವಾ ನೆಲದ ಮೇಲೆ ಬಿದ್ದ ಉಪ್ಪನ್ನು ಪೊರಕೆಯಿಂದ ಗುಡಿಸುವುದು ಅಶುಭವೆಂದು ಹೇಳಲಾಗುತ್ತದೆ. ಈ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ ವಿಡಿಯೋ ನೋಡಿ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More