ಇಂದು (ಅ.12) ನವರಾತ್ರಿಯ ಕೊನೆ ದಿನ. ಒಂಬತ್ತು ದಿನಗಳ ಕಾಲ ದೇವಿಯನ್ನು ವಿವಿಧ ಅವತಾರಗಳಲ್ಲಿ ಪೂಜಿಸಿದೆವು. ಹತ್ತನೇ ದಿನ ಇಂದು ದುರ್ಗೆಯ ಅವತಾರದಲ್ಲಿ ದೇವಿಯನ್ನು ಆರಾಧಿಸುತ್ತೇವೆ. ನವರಾತ್ರಿಯ ಕೊನೆ ದಿನ ವಿಜಯದಶಮಿ. ಹೆಸರೇ ಸೂಚಿಸುವಂತೆ ದುಷ್ಟ ಅಥವಾ ನಕಾರಾತ್ಮಕ ಶಕ್ತಿಗಳ ವಿರುದ್ಧ ವಿಜಯ ಸಾಧಿಸದ ದಿನ. ಈ ವಿಜಯದಶಮಿಯಂದು ಬನ್ನಿಗಿಡವನ್ನು ಪೂಜಿಸಿ, ಬನ್ನಿಗಿಡದ ಎಲೆಯನ್ನು ತೆಗೆದುಕೊಂಡು ಬಂದು ಮನೆಯಲ್ಲಿಟ್ಟು ಪೂಜೆ ಮಾಡಿ, ನಂತರ ಎಲ್ಲರಿಗು ನೀಡುತ್ತೇವೆ. ನಾವು ನೀವು ಬಂಗಾರದ ಹಾಗೆ ಇರೋಣ ಎನ್ನುತ್ತೇವೆ. ಹಾಗಿದ್ದರೆ ವಿಜಯದಶಮಿಯನ್ನು ಯಾಕೆ ಆಚರಣೆ ಮಾಡಬೇಕು? ಆಚರಣೆ ವಿಧಾನವೇನು? ವಿಜಯದಶಮಿ ಮಹತ್ವವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.