ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿ ಆರಾಧನೆಗೆ ಪ್ರಮುಖ ಪ್ರಾಶಸ್ತ್ಯವಿದೆ. ನವಶಕ್ತಿ ದೇವತೆಗಳಲ್ಲಿ ಲಕ್ಷ್ಮಿ ದೇವಿ ಕೂಡ ಒಬ್ಬಳು. ಲಕ್ಷ್ಮಿ ದೇವಿ ಧನದಾತ್ರಿ. ಲಕ್ಷ್ಮಿ ಕಟಾಕ್ಷ ಇದ್ದರೆ ಅವರು ಸಿರಿವಂತರಾಗುತ್ತಾರೆ. ಹಿಂದೂ ಧರ್ಮದ ಪ್ರತಿಯೊಂದು ಮನೆಯಲ್ಲೂ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ ಮತ್ತು ಆರಾಧಿಸುತ್ತಾರೆ. ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿ ದೇವಿ ಆರಾಧನೆ ವಿಶೇಷವಾಗಿ ಮಾಡಲಾಗುತ್ತದೆ. ಅಮವಾಸ್ಯೆ ಮತ್ತು ಬಲಿಪಾಡ್ಯಮಿ ದಿನ ಅಂಗಡಿ ಅಥವಾ ಮನೆಗಳಲ್ಲಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ದೇವಿ ಆರಾಧನೆಗೆ ಯಾವ ಮಂತ್ರ ಪಠಿಸಬೇಕು? ಅದರ ಮಹತ್ವವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ