ಗಣೇಶ ವಿಗ್ರಹವನ್ನು ಮಣ್ಣು, ಗೋಮಾತೆಯ ಸಗಣಿ, ಗಂಧ, ಅರಿಶಿಣದಿಂದ ತಯಾರಿಸಲಾಗುತ್ತದೆ. ಹಾಗೆ ಬಿಳಿ ಎಕ್ಕದ ಗಿಡದ ಬೇರಿನಿಂದಲೂ ಗಣಪತಿ ವಿಗ್ರಹವನ್ನು ತಯಾರಿಸಲಾಗುತ್ತದೆ. ಈ ಗಣಪತಿಗೆ ಎಕ್ಕದ ಗಣಪತಿ ಅಥವಾ ಶ್ವೇತಾರ್ಕ ಗಣಪತಿ ಎಂದೂ ಕರೆಯುತ್ತಾರೆ. ಎಕ್ಕದ ಗಣಪತಿಯನ್ನು ಅಂಗಾರಕ ಸಂಕಷ್ಟಿ ದಿನದಂದು ಪ್ರತಿಷ್ಟಾಪಿಸಿ ಪೂಜಿಸಿದರೆ ಮನೆಯಲ್ಲಿ ಶಾಂತಿ ನೆಲಸಿ ಶ್ರೇಯಸ್ಸು ದೊರೆಯುತ್ತದೆ ಎಂದು ನಂಬಲಾಗಿದೆ. ಎಕ್ಕದ ಗಣಪತಿಯ ಮಹತ್ವವೇನು? ಎಕ್ಕದ ಗಣಪತಿಯನ್ನು ಪೂಜಿಸುವುದರಿಂದ ಆಗುವ ಲಾಭವೇನು ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ