Daily Devotional: ರಾಹುಕಾಲದಲ್ಲಿ ಮಾಡುವ ಪೂಜೆಯ ರಹಸ್ಯ ಮತ್ತು ಮಹತ್ವ ತಿಳಿಯಿರಿ

Updated on: Jun 08, 2025 | 7:05 AM

ಡಾ. ಬಸವರಾಜ್ ಗುರೂಜಿಯವರು ರಾಹುಕಾಲದ ಪೂಜೆಯ ಮಹತ್ವವನ್ನು ವಿವರಿಸಿದ್ದಾರೆ. ರಾಹುಕಾಲವನ್ನು ಕೆಟ್ಟ ಕಾಲವೆಂದು ಪರಿಗಣಿಸಿದರೂ, ಪೂಜೆಗೆ ಇದು ಶುಭಕಾಲವಾಗಿದೆ ಎಂದು ಹೇಳಲಾಗುತ್ತದೆ. ವಿವಿಧ ದಿನಗಳಲ್ಲಿ ರಾಹುಕಾಲದ ಸಮಯ ಮತ್ತು ನಿಂಬೆಹಣ್ಣು, ಕುಂಬಳಕಾಯಿ ದೀಪಗಳನ್ನು ಬಳಸಿ ದುರ್ಗಾ ಅಥವಾ ಕಾಲಭೈರವ ಪೂಜೆ ಮಾಡುವುದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು, ಜೂನ್​ 08: ರಾಹುಕಾಲದಲ್ಲಿ ಪೂಜೆ ಮಾಡುವುದರ ಮಹತ್ವ ಮತ್ತು ರಹಸ್ಯಗಳ ಬಗ್ಗೆ ಡಾ. ಬಸವರಾಜ್ ಗುರುಜಿಯವರು ಈ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ರಾಹುಕಾಲವನ್ನು ಸಾಮಾನ್ಯವಾಗಿ ಕೆಟ್ಟ ಕಾಲವೆಂದು ಪರಿಗಣಿಸಲಾಗುತ್ತದೆ ಆದರೆ, ಪೂಜೆ ಮತ್ತು ಜಪಕ್ಕೆ ಇದು ಅನುಕೂಲಕರವೆಂದು ಹೇಳಲಾಗುತ್ತದೆ. ಪ್ರತಿ ದಿನದ ರಾಹುಕಾಲದ ಸಮಯವನ್ನು ವಿವರಿಸಲಾಗಿದೆ. ವಿಡಿಯೋ ನೋಡಿ.