Daily Devotional: ರಾಹುಕಾಲದಲ್ಲಿ ಮಾಡುವ ಪೂಜೆಯ ರಹಸ್ಯ ಮತ್ತು ಮಹತ್ವ ತಿಳಿಯಿರಿ

Updated on: Jun 08, 2025 | 7:05 AM

ಡಾ. ಬಸವರಾಜ್ ಗುರೂಜಿಯವರು ರಾಹುಕಾಲದ ಪೂಜೆಯ ಮಹತ್ವವನ್ನು ವಿವರಿಸಿದ್ದಾರೆ. ರಾಹುಕಾಲವನ್ನು ಕೆಟ್ಟ ಕಾಲವೆಂದು ಪರಿಗಣಿಸಿದರೂ, ಪೂಜೆಗೆ ಇದು ಶುಭಕಾಲವಾಗಿದೆ ಎಂದು ಹೇಳಲಾಗುತ್ತದೆ. ವಿವಿಧ ದಿನಗಳಲ್ಲಿ ರಾಹುಕಾಲದ ಸಮಯ ಮತ್ತು ನಿಂಬೆಹಣ್ಣು, ಕುಂಬಳಕಾಯಿ ದೀಪಗಳನ್ನು ಬಳಸಿ ದುರ್ಗಾ ಅಥವಾ ಕಾಲಭೈರವ ಪೂಜೆ ಮಾಡುವುದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು, ಜೂನ್​ 08: ರಾಹುಕಾಲದಲ್ಲಿ ಪೂಜೆ ಮಾಡುವುದರ ಮಹತ್ವ ಮತ್ತು ರಹಸ್ಯಗಳ ಬಗ್ಗೆ ಡಾ. ಬಸವರಾಜ್ ಗುರುಜಿಯವರು ಈ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ರಾಹುಕಾಲವನ್ನು ಸಾಮಾನ್ಯವಾಗಿ ಕೆಟ್ಟ ಕಾಲವೆಂದು ಪರಿಗಣಿಸಲಾಗುತ್ತದೆ ಆದರೆ, ಪೂಜೆ ಮತ್ತು ಜಪಕ್ಕೆ ಇದು ಅನುಕೂಲಕರವೆಂದು ಹೇಳಲಾಗುತ್ತದೆ. ಪ್ರತಿ ದಿನದ ರಾಹುಕಾಲದ ಸಮಯವನ್ನು ವಿವರಿಸಲಾಗಿದೆ. ವಿಡಿಯೋ ನೋಡಿ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More