ಅಂಬೇಡ್ಕರ್ ಜಯಂತಿ ನಿಮಿತ್ತ ಹೊಸಪೇಟೆ ಉತ್ತರಾಧಿ ಮಠಕ್ಕೆ ಪ್ರವೇಶ ಮಾಡಿದ ದಲಿತರು

|

Updated on: Apr 14, 2024 | 4:56 PM

ಅಂಬೇಡ್ಕರ್ ಜಯಂತಿ ನಿಮಿತ್ತ ಹೊಸಪೇಟೆಯಲ್ಲಿ(Hosapete) ಉತ್ತರಾಧಿ ಮಠಕ್ಕೆ ದಲಿತ ಹೋರಾಟ ಸಮಿತಿಯವರು ಪ್ರವೇಶ ಮಾಡಿದರು. ಈ ವೇಳೆ ಮಠದ ಅರ್ಚಕರು ಹಾಗೂ ಮಠದ ಆಡಳಿತ ಮಂಡಳಿಯವರು ದಲಿತರನ್ನ ಸ್ವಾಗತ ಮಾಡಿದರು. ಎಲ್ಲರಿಗೂ ಸಮಾನ ಅವಕಾಶ ನೀಡಲಿ, ಎಲ್ಲರೂ ಮಠಕ್ಕೆ ಹೋಗಲಿ ಎನ್ನುವ ಮೂಲಕ ಪ್ರವೇಶಿಸಿದರು.

ವಿಜಯನಗರ, ಏ.14: ಅಂಬೇಡ್ಕರ್ ಜಯಂತಿ ನಿಮಿತ್ತ ಹೊಸಪೇಟೆಯಲ್ಲಿ(Hosapete) ಉತ್ತರಾಧಿ ಮಠಕ್ಕೆ ದಲಿತ ಹೋರಾಟ ಸಮಿತಿಯವರು ಪ್ರವೇಶ ಮಾಡಿದರು. ಈ ವೇಳೆ ಮಠದ ಅರ್ಚಕರು ಹಾಗೂ ಮಠದ ಆಡಳಿತ ಮಂಡಳಿಯವರು ದಲಿತರನ್ನ ಸ್ವಾಗತ ಮಾಡಿದರು. ಎಲ್ಲರಿಗೂ ಸಮಾನ ಅವಕಾಶ ನೀಡಲಿ, ಎಲ್ಲರೂ ಮಠಕ್ಕೆ ಹೋಗಲಿ ಎನ್ನುವ ಮೂಲಕ ಪ್ರವೇಶಿಸಿದರು. ಇನ್ನು ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಮಠಕ್ಕೆ ಪ್ರವೇಶ ಮಾಡಿದ ದಲಿತರಿಗೆ ಆರತಿ ಕೊಟ್ಟರು. ಈ ವೇಳೆ ಹೊಸಪೇಟೆ ಪಟ್ಟಣ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Sun, 14 April 24

Follow us on