‘ದರ್ಶನ್ ಪಶ್ಚಾತಾಪದಲ್ಲಿದ್ದಾರೆ, ಮತ್ತೆ ಜೈಲಿಗೆ ಬರಬೇಡಿ ಎಂದರು’; ವಿನೋದ್ ರಾಜ್

Updated on: Aug 24, 2024 | 8:06 AM

ವಿನೋದ್ ರಾಜ್ ಅವರು ಇತ್ತೀಚೆಗೆ ದರ್ಶನ್ ಅವರನ್ನು ಜೈಲಲ್ಲಿ ಭೇಟಿ ಆಗಿದ್ದರು. ಆ ಬಳಿಕ ರೇಣುಕಾ ಸ್ವಾಮಿ ಕುಟುಂಬದವರನ್ನೂ ಮೀಟ್ ಮಾಡಿದ್ದರು. ಈಗ ದರ್ಶನ್ ಬಗ್ಗೆ ವಿನೋದ್ ರಾಜ್​ ಅವರು ಮಾತನಾಡಿದ್ದಾರೆ.

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಅವರನ್ನು ನೋಡಲು ಅನೇಕ ಸೆಲೆಬ್ರಿಟಿಗಳು ತೆರಳಿದ್ದಾರೆ. ನಟ ವಿನೋದ್ ರಾಜ್ ಕೂಡ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ದರ್ಶನ್ ಬಗ್ಗೆ ವಿನೋದ್ ರಾಜ್ ಮಾತನಾಡಿದ್ದಾರೆ. ‘ದರ್ಶನ್​ಗೆ ಹೆಚ್ಚು ಪ್ರೀತಿ-ಅನುಕಂಪ ಇದೆ. ನನ್ನ ತಾಯಿಗೆ ಅನಾರೋಗ್ಯ ಆದಾಗ ಅವರು ಬಂದಿದ್ದರು. ಕಾಲಿಗೆ ಬಿದ್ದಿದ್ದರು. ಅವರು ಕೊಡುವ ಗೌರವ ಅಪಾರ. ಕಾರಾಗೃಹಕ್ಕೆ ಹೋದಾಗ ನನ್ನ ನೋಡಿ ಅತ್ತರು. ಕಲಾವಿದರಿಗೆ ಈ ರೀತಿ ಪರಿಸ್ಥಿತಿ ಬರಬಾರದಿತ್ತು. ನಿತ್ಯ ನಾವು ಏನು ಮಾಡುತ್ತಿದ್ದೇವೆ ಅನ್ನೋದೇ ಅರ್ಥ ಆಗುತ್ತಿಲ್ಲ. ಮೇಲೆ ದೇವರನ್ನು ನೋಡಿ ಕೆಳಗೆ ನೋಡಿದಾಗ ಈ ರೀತಿಯ ದೃಶ್ಯಗಳು ಕಾಣುತ್ತವೆ. ದರ್ಶನ್ ತುಂಬಾ ಪಶ್ಚಾತಾಪದಲ್ಲಿದ್ದಾರೆ. ಅಣ್ಣ ನೀನು ಜೈಲಿಗೆ ಬರಬೇಡ, ನಿನ್ನತ್ರ ನಾನೇ ಬರ್ತೀನಿ ಎಂದಿದ್ದಾರೆ’ ಎಂಬುದಾಗಿ ಮಾತನಾಡುತ್ತಾ ಕಣ್ಣೀರು ಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More