ದರ್ಶನ್ ಸೆಲಿಬ್ರಿಟಿಯಾಗಿರುವುದರಿಂದ ಕೈದಿಗಳೂ ಮಾತಾಡಲು ಹಾತೊರೆಯುತ್ತಾರೆ: ಉಮೇಶ್ ಬಣಕಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Aug 28, 2024 | 5:54 PM

ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಹಿಂದಿನ ಕಾನೂನು ಪ್ರಕ್ರಿಯೆಗಳು ಏನು ಅಂತ ಗೊತ್ತಿಲ್ಲ, ಅದರೆ ರೌಡಿಗಳೊಂದಿಗೆ ಕಾಫಿ ಕುಡಿಯುತ್ತಿರುವ ಕಾರಣಕ್ಕೆ ಶಿಫ್ಟ್ ಮಾಡುತ್ತಾರೆಂದರೆ ಅದು ತಪ್ಪು, ಸರ್ಕಾರ ತನ್ನ ವೈಫಲ್ಯವನ್ನು ದರ್ಶನ್ ಮೇಲೆ ಹೇರಕೂಡದು ಅಂತ ಉಮೇಶ್ ಬಣಕಾರ್ ಹೇಳಿದರು.

ಬೆಂಗಳೂರು: ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಉಮೇಶ್ ಬಣಕಾರ್, ಚಿತ್ರನಟ ದರ್ಶನ್ ಜೈಲಿನಲ್ಲಿ ಬೇರೆ ಕೊಲೆ ಆರೋಪಿಗಳ ಜೊತೆ ಕಾಫಿ ಹೀರುತ್ತಾ ಮಾತಾಡುತ್ತಿರವುದರಲ್ಲಿ ಯಾವುದೇ ತಪ್ಪಿಲ್ಲ, ಅವರೊಬ್ಬ ಸೆಲಿಬ್ರಿಟಿಯಾಗಿರುವುದರಿಂದ ಜೈಲಲ್ಲಿದ್ದ ಕೈದಿಗಳು ಅವರನ್ನು ಸುತ್ತವರಿದಿದ್ದಾರೆ ಮತ್ತು ಅವರೊಂದಿಗೆ ಮಾತಾಡಲು, ಮತ್ತು ಸಮಯ ಕಳೆಯಲು ಬಯಸಿರುತ್ತಾರೆ, ಅದನ್ನು ಯಾವನೋ ಒಬ್ಬ ಫೋಟೋ ತೆಗೆದು ದುಡ್ಡಿಗಾಗಿ ಮಾಧ್ಯಮವದರಿಗೆ ಮಾರಿಕೊಂಡಿರುತ್ತಾನೆ, ದರ್ಶನ್ ಗೆ ಅಲ್ಲೂ ನಂಬಿಕೆದ್ರೋಹ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಹಿಂದೆ ರಾಜಕೀಯ ಉದ್ದೇಶವಿಲ್ಲ: ಎನ್ ಎಸ್ ಬೋಸರಾಜು

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.