ಜೈಲಿನಲ್ಲಿರೋ ದರ್ಶನ್ಗೆ ಅಲ್ಲಿನ ಜೀವನ ಸಾಕಾಗಿ ಹೋಗಿದೆ. ಜೈಲಿನ ಊಟ ಸೇರುತ್ತಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ಕೋಟಿ ಕೋಟಿ ಇದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಯಾಕಾದರೂ ಸಿಲುಕಿಕೊಂಡೆನೋ ಎನ್ನುವ ಪಶ್ಚಾತಾಪ ಅವರನ್ನು ಬಹುವಾಗಿ ಕಾಡುತ್ತಿದೆ. ಈ ಮಧ್ಯೆ ದರ್ಶನ್ನ ಭೇಟಿ ಮಾಡಲು ಅವರ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಹಾಗೂ ಸಹೋದರ ದಿನಕರ್ ಜೈಲಿಗೆ ತೆರಳಿದ್ದರು. ಈ ವೇಳೆ ಮಗನ ತಬ್ಬಿ ದರ್ಶನ್ ಹಗುರಾಗಿದ್ದಾರೆ. ಇದೇ ವೇಳೆ ದರ್ಶನ್ಗೆ ಪ್ರಸಾದ ನೀಡಿದ್ದಾರೆ ವಿಜಯಲಕ್ಷ್ಮೀ. ಇತ್ತೀಚೆಗೆ ವಿಜಯಲಕ್ಷ್ಮೀ ಅವರು ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಯಲ್ಲಿ ನವಚಂಡಿಕಾ ಹೋಮ ಮಾಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:13 am, Tue, 30 July 24