ಆರ್​ಸಿಬಿ ಸೋತರೇನಂತೆ ಗುರೂ, ಡೆಲ್ಲಿಯ ರಾಹುಲ್ ಕೂಡ ನಮ್ಮ ಹುಡುಗ ತಾನೇ? ಆರ್​​ಸಿಬಿ ಅಭಿಮಾನಿಗಳು

ಅರುಣ್​ ಕುಮಾರ್​ ಬೆಳ್ಳಿ

Updated on: Apr 11, 2025 | 10:24 AM

ಕೆಲ ಅಭಿಮಾನಿಗಳು ರಜತ್ ಪಾಟೀದರ್ ತಂಡ ಸ್ಟ್ರಾಟಿಜಿಯನ್ನು ಬದಲಾಯಿಸಬೇಕು ಅನ್ನುತ್ತಾರೆ, ಪ್ರತಿ ಪಂದ್ಯಕ್ಕೆ ಒಂದೇ ಸ್ಟ್ರಾಟಿಜಿ ನಡೆಯಲ್ಲ ಅನ್ನೋದು ಅವರ ವಾದ. 163 ರನ್ ಮೊತ್ತ ತುಂಬಾ ಕಡಿಮೆ ಅಯ್ತು ಗುರೂ, ಕನಿಷ್ಠ 200 ರನ್​ ಅದರೂ ಗಳಿಸಬೇಕಿತ್ತು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೇಗೆ ಬ್ಯಾಟ್ ಮಾಡಬೇಕು ಅಂತ ರಾಹುಲ್ ತೋರಿಸಿಕೊಟ್ಟಿದ್ದಾನೆ ಅಂತ ಅಭಿಮಾನಿಯೊಬ್ಬರು ಹೇಳುತ್ತಾರೆ.

ಬೆಂಗಳೂರು, ಏಪ್ರಿಲ್ 11: ನಿನ್ನೆ ರಾತ್ರಿ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ಲೋಕಲ್ ತಂಡ ಆರ್​​ಸಿಬಿ ಸೋತಿದಕ್ಕೆ ಅಭಿಮಾನಿಗಳ ಸಮರ್ಥನೆ ಚೆನ್ನಾಗಿದೆ ಮಾರಾಯ್ರೇ! ಪರ್ವಾಗಿಲ್ಲ, ನಮ್ಮ ಟೀಮ್ ಸೋತರೂ ಕೆಎಲ್ ರಾಹುಲ್ ಚೆನ್ನಾಗಿ ಅಡಿದ, ಅವ್ನೂ ನಮ್ಮ ಹುಡುಗನೇ ತಾನೇ ಅಂತಿದ್ದಾರೆ ಜನ. ಬೇರೆ ಕಡೆ ಚೆನ್ನಾಗಿ ಆಡಿ ಗೆಲ್ಲುತ್ತಿದ್ದಾರೆ, ಅದರೆ ಹೋಂ ಗ್ರೌಂಡ್ ನಲ್ಲಿ ಸೋಲ್ತಾ ಇದ್ದಾರೆ, ತೊಂದರೆ ಇಲ್ಲ, ಮುಂದಿನ ಪಂದ್ಯಗಳನ್ನು ಗೆಲ್ಲುತ್ತಾರೆ ಅಂತ ಕೆಲವರು ಹೇಳುತ್ತಾರೆ. ಆರ್​ಸಿಬಿ ಗೆಲ್ಲಲಿ ಸೋಲಲಿ, ನಾವಂತೂ ಬೆಂಗಳೂರು ತಂಡದ ಅಭಿಮಾನಿಗಳು ಅಂತ ಯುವತಿಯರು ಹೇಳುತ್ತಾರೆ.

ಇದನ್ನೂ ಓದಿ:  ‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್ ಸೆಲೆಬ್ರೇಷನ್ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.