4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ, ಇಲ್ಲಿದೆ ನೋಡಿ ವಿಡಿಯೋ

Updated on: May 22, 2026 | 5:05 PM

ದೆಹಲಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗ ಕೊನೆಗೂ ಮನೆಗೆ ಮರಳಿದ್ದಾನೆ. ಮಗನ ಅಗಲಿಕೆಯ ನೋವಿನಲ್ಲಿ ಮುಳುಗಿದ್ದ ತಾಯಿ, ಆತನನ್ನು ಕಂಡೊಡನೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ಹೃದಯಸ್ಪರ್ಶಿ ಪುನರ್ಮಿಲನ ಇಡೀ ಕುಟುಂಬಕ್ಕೆ ಸಂತೋಷ ತಂದಿದೆ. ಬಡ ಹೆತ್ತವರ ಕಾದಾಟ ಕೊನೆಗೊಂಡಿದ್ದು, ಆತಂಕದ ಬದುಕು ಆನಂದಕ್ಕೆ ತಿರುಗಿದೆ.

ದೆಹಲಿ, ಮೇ.22: ಹೆತ್ತ ಕರಳಿಗೆ ತನ್ನ ಮಗನೇ ಸರ್ವಸ್ವ. ಅಂತಹ ಮಗ ಕಣ್ಣೆದುರೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಟ್ಟರೆ ಆ ಹೆತ್ತವರ ಒಡಲು ಅನುಭವಿಸುವ ನರಕಯಾತನೆ ಅಷ್ಟಿಷ್ಟಲ್ಲ. ಇಲ್ಲೊಂದು ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಮಗನ ಅಗಲಿಕೆಯ ತೀವ್ರ ವೇದನೆಯನ್ನು ಅನುಭವಿಸುತ್ತಿತ್ತು. ಆದರೆ ಇಂದು, ಆ ಕಳೆದುಹೋಗಿದ್ದ ಮಗ ಸಾಕ್ಷಾತ್ ತನ್ನ ಕಣ್ಣೆದುರೇ ಬಂದು ನಿಂತಾಗ, ಆ ತಾಯಿ ನಿಯಂತ್ರಿಸಲಾಗದೆ ಭಾವುಕತೆಯ ಕಣ್ಣೀರಿನ ಮಹಾಪೂರವನ್ನೇ ಹರಿಸಿದ್ದಾಳೆ. ಈ ಹೃದಯಸ್ಪರ್ಶಿ ದೃಶ್ಯಕ್ಕೆ ಸಾಕ್ಷಿಯಾದ ಇಡೀ ವಾತಾವರಣವೇ ಭಾವುಕತೆಯ ಗೂಡಾಗಿ ಮಾರ್ಪಟ್ಟಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಬಡ ಹೆತ್ತವರು ಪ್ರತಿಕ್ಷಣವೂ ಅನುಭವಿಸಿದ ನೋವು, ಪಟ್ಟ ಪಾಡು ಮತ್ತು ಎದೆಯೊಳಗಿನ ಯಾತನೆ ಎಂತವರ ಕಣ್ಣಲ್ಲೂ ನೀರು ತರಿಸುವಂತದ್ದು. ಮಗ ಜೀವಂತವಾಗಿದ್ದಾನೋ ಇಲ್ಲವೋ ಎಂಬ ಆತಂಕದ ಮಧ್ಯೆಯೇ ದಿನ ದೂಡುತ್ತಿದ್ದ ಆ ಪೋಷಕರಿಗೆ ಇಂದು ಜಗತ್ತಿನ ಅತ್ಯಂತ ದೊಡ್ಡ ಸಂತೋಷ ಸಿಕ್ಕಂತಾಗಿದೆ. ಮಗನನ್ನು ಬಿಗಿದಪ್ಪಿ ಅಳುತ್ತಿದ್ದ ಆ ತಾಯಿಯ ಕಣ್ಣೀರು, ಆಕೆ ಇಷ್ಟು ವರ್ಷಗಳ ಕಾಲ ಮನಸ್ಸಿನೊಳಗೆ ಬಚ್ಚಿಟ್ಟುಕೊಂಡಿದ್ದ ಕೋಟಿ ಜನ್ಮಗಳ ನೋವನ್ನು ಹೊರಹಾಕುತ್ತಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More