AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಮಾವತಿ ಕೆನಾಲ್ ವಿವಾದ: ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ

ಹೇಮಾವತಿ ಕೆನಾಲ್ ವಿವಾದ: ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ

ಜಗದೀಶ ಬಿ.
| Edited By: |

Updated on: Aug 12, 2026 | 10:47 AM

Share

Hemavathi Linking Canal Row: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಣ್ಣನಪಾಳ್ಯದಲ್ಲಿ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿ ವಿವಾದ ತಾರಕಕ್ಕೇರಿದೆ. ಬರ ವೀಕ್ಷಣೆಗೆ ಬಂದ ಡಿಸಿಎಂ ಪರಮೇಶ್ವರ್ ಅವರ ಕಾರಿಗೆ ರೈತರು ಅಡ್ಡಲಾಗಿ ಬಿದ್ದು ಪ್ರತಿಭಟಿಸಿದ್ದಾರೆ. ನಮಗೆ ನ್ಯಾಯ ಬೇಕು, ಯೋಜನೆ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿರುವ ಪ್ರಸಂಗ ನಡೆದಿದೆ.

ತುಮಕೂರು, ಆಗಸ್ಟ್​​ 12: ತುಮಕೂರಿನಲ್ಲಿ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿ ವಿವಾದ ತಾರಕಕ್ಕೇರಿದ್ದು,
ಕಾಮಗಾರಿ ಸಂಬಂಧ ಪರ-ವಿರೋಧ ಹೋರಾಟಗಳು ತೀವ್ರಗೊಂಡಿವೆ. ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಕುಣಿಗಲ್ ರೈತರು, ಬರ ವೀಕ್ಷಣೆಗಾಗಿ ತೆರಳುತ್ತಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಶೀಘ್ರದಲ್ಲೇ ಕಾಮಗಾರಿ ಆರಂಭ ಮಾಡೊದಾಗಿ ಭರವಸೆ ನೀಡುವ ಮೂಲಕ ಡಿಸಿಎಂ ರೈತರ ಮನವೊಲಿಸಿದ್ದು, ಹೇಮಾವತಿ ಲಿಂಕಿಂಗ್ ಕೆನಾಲ್ ಯೋಜನೆ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us