Dy CM meets former CM: ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಮನೆಗೆ ತೆರಳಿ ಗೌರವ ಸಲ್ಲಿಸಿದ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್

|

Updated on: May 22, 2023 | 11:00 AM

ಕೃಷ್ಣ ಅವರಿಗೆ ಬೋಕೆ ನೀಡಿದ ಬಳಿಕ ಶಿವಕುಮಾರ್, ವಿಶ್ರಾಂತ ಜೀವನ ನಡೆಸುತ್ತಿರುವ ನಾಯಕನ ಪಾದಮುಟ್ಟಿ ಆಶೀರ್ವಾದ ಪಡೆದರು.

ಬೆಂಗಳೂರು: ಕಳೆದ ವಾರ ವಿಪರೀತ ದಣಿದಿದ್ದ ಮತ್ತು ಮಾಧ್ಯಮ ಪ್ರತಿನಿಧಿಗಳ ಮುಂದೆ ನಂಗೆ ನಿದ್ರೆ ಬೇಕಾಗಿದೆ, ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ರವಿವಾರವಾಗಿದ್ದ ನಿನ್ನೆ ಚೆನ್ನಾಗಿ ನಿದ್ರಿಸಿ ದಣಿವಾರಿಸಿಕೊಂಡಂತಿದೆ. ಇಂದು ಬೆಳಗ್ಗೆ ಅವರು ರಾಜ್ಯದ ಹಿರಿಯ ಮುತ್ಸದ್ದಿ (senior statesman), ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ (SM Krishna) ಅವರ ನಿವಾಸಕ್ಕೆ ತೆರಳಿ ಗೌರವಿಸಿದರು. ಕೃಷ್ಣ ಅವರಿಗೆ ಬೋಕೆ ನೀಡಿದ ಬಳಿಕ ಶಿವಕುಮಾರ್, ವಿಶ್ರಾಂತ ಜೀವನ ನಡೆಸುತ್ತಿರುವ ನಾಯಕನ ಪಾದಮುಟ್ಟಿ ಆಶೀರ್ವಾದ ಪಡೆದರು. ಅಮೇಲೆ ಅವರು ಶ್ರೀಮತಿ ಪ್ರೇಮ ಕೃಷ್ಣ ಅವರ ಪಾದಗಳಿಗೂ ನಮಸ್ಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on