ಬೆಂಗಳೂರಲ್ಲಿ‌ ಹದಗೆಟ್ಟ ಕಾನೂನು ಸುವ್ಯವಸ್ಥೆ; ಡೆಲಿವರಿ ಬಾಯ್ ಅಡ್ಡಗಟ್ಟಿ ರಾಬರಿ, ತಲ್ವಾರ್​ನಿಂದ ಹೊಡೆದು ಅಟ್ಟಹಾಸ

|

Updated on: Aug 21, 2024 | 3:22 PM

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮೀತಿಮೀರಿದ್ದು, ಇವರಿಗೆ ಪೊಲೀಸರ ಭಯ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಹೌದು, ಒಂದೇ ಕಡೆ ಎರಡೆರಡು ಕಳ್ಳತನ ಘಟನೆ ನಡೆದರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮೂಲಕ ರಾತ್ರಿ ಹೊತ್ತು ಮನೆಯಿಂದ ಹೊರಗಡೆ ಬರಲು ಹೆದರುವಂತಹ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು, ಆ.21: ಬೆಂಗಳೂರಲ್ಲಿ‌ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹೌದು, ರಸ್ತೆ ರಸ್ತೆಯಲ್ಲಿಯೂ ಪುಂಡರು ಟೂಲ್ಸ್ ಹಿಡಿದು ರಾಬರಿಗೆ ಇಳಿದಿದ್ದಾರೆ. ಅದರಂತೆ ಇದೀಗ ಹೊಟ್ಟೆಪಾಡಿಗಾಗಿ ಮಧ್ಯರಾತ್ರಿವರೆಗೂ ಕೆಲಸ ಮಾಡುವ ಡೆಲವರಿ ಬಾಯ್​ಗೆ ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ತಲ್ವಾರ್​ನಿಂದ ಹೊಡೆದು ಅಟ್ಟಹಾಸ ಮೆರೆದಿದ್ದಾರೆ. ಈ ಘಟನೆ ಕೋನೇನ ಅಗ್ರಹಾರ ವಿನಾಯಕನಗರ ಬಿ ಬ್ಲಾಕ್​ನಲ್ಲಿ ನಡೆದಿದ್ದು, ಒಂದೇ ಕಡೆ ಎರಡೆರಡು ಘಟನೆ ನಡೆದರು ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on