SIT ತನಿಖೆ ವೇಳೆ ಯೂಟ್ಯೂರ್ ಎಂಟ್ರಿ: ರೊಚ್ಚಿಗೆದ್ದ ಸ್ಥಳೀಯರು, ಮುಂದೇನಾಯ್ತು?

Updated on: Sep 10, 2025 | 7:16 PM

ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇಂದು ಸಹ ಎಸ್​ಐಟಿ ವಿಚಾರಣೆಗೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು, ಕಚೇರಿ ಒಳಗೆ ಹೋಗೋ ಮುನ್ನ ಥಮ್ಸ್​ ಅಪ್ ಮಾಡಿ, ಜಸ್ಟೀಸ್ ಫಾರ್ ಸೌಜನ್ಯ ಎಂದಿದ್ದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಎಸ್​​ಐಟಿ ಅಧಿಕಾರಿಗಳು ವಿಠಲಗೌಡ ಅವರನ್ನು ಬಂಗ್ಲೆಗುಡ್ಡ ಬಳಿ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು. ಇದೇ ವೇಳೆ ಸ್ಥಳಕ್ಕೆ 'ಕುಡ್ಲ ರಾಂಪೇಜ್' ಪೇಜಿನ ಯುಟ್ಯೂಬರ್ ಆಗಮಿಸಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶಗೊಂಡಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆಯಿತು.

ಮಂಗಳೂರು, (ಸೆಪ್ಟೆಂಬರ್ 10): ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇಂದು ಸಹ ಎಸ್​ಐಟಿ ವಿಚಾರಣೆಗೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು, ಕಚೇರಿ ಒಳಗೆ ಹೋಗೋ ಮುನ್ನ ಥಮ್ಸ್​ ಅಪ್ ಮಾಡಿ, ಜಸ್ಟೀಸ್ ಫಾರ್ ಸೌಜನ್ಯ ಎಂದಿದ್ದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಎಸ್​​ಐಟಿ ಅಧಿಕಾರಿಗಳು ವಿಠಲಗೌಡ ಅವರನ್ನು ಬಂಗ್ಲೆಗುಡ್ಡ ಬಳಿ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು. ಇದೇ ವೇಳೆ ಸ್ಥಳಕ್ಕೆ ‘ಕುಡ್ಲ ರಾಂಪೇಜ್’ ಪೇಜಿನ ಯುಟ್ಯೂಬರ್ ಆಗಮಿಸಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶಗೊಂಡಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆಯಿತು.