Karnataka Budget Session: ಸದನದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡುವಾಗ ಶಿವಕುಮಾರ್ ಪಕ್ಷದ ಶಾಸಕನನ್ನು ಗದರಿದ್ದು ಯಾಕೆ ಗೊತ್ತಾ?
ಶಿವಕುಮಾರ್ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡುವಾಗ ನಡುವೆ ಬಾಯಿ ಹಾಕಿದ್ದು ಕೇವಲ ವಿರೋಧ ಪಕ್ಷದ ನಾಯಕರಲ್ಲ, ಆಡಳಿತ ಪಕ್ಷದ ಶಾಸಕರೊಬ್ಬರು ಎದ್ದು ನಿಂತು ಏನನ್ನೋ ಹೇಳಬಯಸಿದರು. ಆಗಲೇ ತಾಳ್ಮೆ ಕಳೆದುಕೊಂಡಿದ್ದ ಉಪ ಮುಖ್ಯಮಂತ್ರಿ, ಏಯ್ ನೀವು ಸ್ವಲ್ಪ ಸುಮ್ನಿರಿ, ಅವರ ಜೊತೆ ಸೇರಿ ನೀವ್ಯಾಕೆ ಬಾಯಿ ಮಾಡ್ತಾ ಇದ್ದೀರಿ ಅಂತ ಗದರುತ್ತಾರೆ.
ಬೆಂಗಳೂರು, ಮಾರ್ಚ್ 11: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತೊಮ್ಮೆ ಸದನದಲ್ಲಿ ಗ್ಯಾರಂಟಿ ಯೋಜನೆಗಳನ್ನು (Guarantee schemes) ಜಾರಿಗೆ ತಂದ ಹಿಂದಿನ ಉದ್ದೇಶದ ಬಗ್ಗೆ ಮಾತಾಡಿದರು. ಕಾಂಗ್ರೆಸ್ ಪಕ್ಷದ ನಾಯಕರು ದೇಶದ ಉದ್ದಗಲಕ್ಕೆ ಪ್ರವಾಸ ಮಾಡಿ ಬೆಲೆಯೇರಿಕೆಯಿಂದ ಜನ ತತ್ತರಿಸಿರುವುದನ್ನು ಮನಗಂಡ ಬಳಿಕ 5 ಗ್ಯಾರಂಟಿ ಯೋಜನೆ ತರುವ ನಿರ್ಧಾರ ಮಾಡಲಾಯಿತು ಎಂದು ಅವರು ಹೇಳಿದರು. ಅವರ ಮಾತಿಗೆ ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದಾಗ, ಕೇಳೋದು ಬೇಕಿಲ್ಲ ಅಂದರೆ ಬಿಟ್ಟುಬಿಡಿ, ಅಧ್ಯಕ್ಷರು ಮಾತಾಡಲು ಕರೆದಿದ್ದಕ್ಕೆ ಮಾತಾಡುತ್ತಿದ್ದೇನೆ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session; ರನ್ಯಾ ರಾವ್ ಪ್ರಕರಣದಲ್ಲಿ ಸಚಿವರು ಶಾಮೀಲಾಗಿದ್ದರೆ ಸಿಬಿಐ ತನಿಖೆ ಮಾಡುತ್ತದೆ: ಪರಮೇಶ್ವರ್