AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DK Shivakumar: ವಿರೋಧ ಪಕ್ಷದ ಶಾಸಕರನ್ನು ಸಭೆಗೆ ಕರೆದ ಡಿಕೆ ಶಿವಕುಮಾರ್ ಖುದ್ದು ನಾಪತ್ತೆ, ಬೇಸರಿಸಿಕೊಂಡು ಹೊರಬಿದ್ದ ಬಿಜೆಪಿ ಶಾಸಕರು!

DK Shivakumar: ವಿರೋಧ ಪಕ್ಷದ ಶಾಸಕರನ್ನು ಸಭೆಗೆ ಕರೆದ ಡಿಕೆ ಶಿವಕುಮಾರ್ ಖುದ್ದು ನಾಪತ್ತೆ, ಬೇಸರಿಸಿಕೊಂಡು ಹೊರಬಿದ್ದ ಬಿಜೆಪಿ ಶಾಸಕರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 05, 2023 | 1:43 PM

ಶಾಸಕರು ಹೊರಡುವ ಮೊದಲು ಮಾಧ್ಯಮ ಪ್ರತಿನಿಧಿಗಳ ಮುಂದೆ ತಮ್ಮ ಅಸಹನೆಯನ್ನು ಬಹಿರಂಗಪಡಿಸಿದರು.

ಬೆಂಗಳೂರು: ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಷಯಗಳನ್ನು ಚರ್ಚಿಸಲು  ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ವಿರೋಧ ಪಕ್ಷದ ಶಾಸಕರೂ ಸೇರಿದಂತೆ ನಗರದ ಎಲ್ಲ ಶಾಸಕರನ್ನು ಇಂದು ಸಭೆಗೆ ಆಹ್ವಾನಿಸಿದ್ದರು. ಸಭೆ ವಿಧಾನ ಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಸಮಯ 12 ಮೀರಿದರೂ ಶಿವಕುಮಾರ್ ಸಭೆಗೆ ಬರಲಿಲ್ಲ. ಕಾಯ್ದು ಕಾಯ್ದು ಬೇಸತ್ತ ಬಿಜೆಪಿ ಶಾಸಕರಾದ ಬೈರತಿ ಬಸವರಾಜ (Byrathi Basavaraj), ಎಸ್ ಟಿ ಸೋಮಶೇಖರ್ (ST Somashekar), ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಬೇಸರ ಮಾಡಿಕೊಂಡು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾ ಅಲ್ಲಿಂದ ಹೊರಟರು. ಹೊರಡುವ ಮೊದಲು ಮಾಧ್ಯಮ ಪ್ರತಿನಿಧಿಗಳ ಮುಂದೆ ತಮ್ಮ ಅಸಹನೆಯನ್ನು ಬಹಿರಂಗಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ