ಕೃಷ್ಣಜನ್ಮಾಷ್ಟಮಿ: ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನೆಯಲ್ಲಿ ಹಬ್ಬದೂಟ ಸವಿದ ಡಿಕೆ ಶಿವಕುಮಾರ್

ಕೃಷ್ಣಜನ್ಮಾಷ್ಟಮಿ: ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನೆಯಲ್ಲಿ ಹಬ್ಬದೂಟ ಸವಿದ ಡಿಕೆ ಶಿವಕುಮಾರ್
|

Updated on: Sep 06, 2023 | 5:15 PM

ಕೇವಲ ಭೇಟಿ ಮಾತ್ರ ಅಲ್ಲ, ಶಾಸಕಿಯ ಮನೆಯಲ್ಲಿ ಹಬ್ಬದೂಟವನ್ನೂ ಸವಿದರು. ಶಿವಕುಮಾರ್ ಬಾಯಿ ಚಪ್ಪರಿಸುತ್ತಾ ಊಟ ಮಾಡೋದ್ರಲ್ಲಿ ಮಗ್ನರಾಗಿದ್ದಾಗ ಪೂರ್ಣಿಮಾ ಉಪ ಮುಖ್ಯಮಂತ್ರಿಯ ಪಕ್ಕದಲ್ಲೇ ಕೂತಿದ್ದರು. ಶಿವಕುಮಾರ್ ಸುತ್ತ ನೆರೆದಿರುವ ಪೂರ್ಣಿಮಾ ಕುಟುಂಬದ ಸದಸ್ಯರು ಅವರು ಈಟ ಮಾಡುವುದನ್ನು ನೋಡುತ್ತಿದ್ದರು

ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಬಿಜೆಪಿ ನಾಯಕರನ್ನು ಅವರ ಮನೆಗಳಿಗೆ ಹೋಗಿ ಭೇಟಿಯಾಗುವುದು ಇಲ್ಲವೇ ತಮ್ಮ ನಿವಾಸಕ್ಕೆ ಬರಮಾಡಿಕೊಳ್ಳಿವುದನ್ನು ಯಾಕೆ ಮಾಡುತ್ತಿದ್ದಾರೆ ಅಂತ ಕನ್ನಡಿಗರಿಗೆ ಅರ್ಥವಾಗೋದು ಸ್ವಲ್ಪ ಕಷ್ಟವಾದರೂ ರಾಜ್ಯದ ಹಿರಿಯ ಬಿಜೆಪಿ ನಾಯಕರಿಗೆ ಚೆನ್ನಾಗಿ ಅರ್ಥವಾಗುತ್ತಿದೆ. ಕೃಷ್ಣಜನ್ಮಾಷ್ಟಮಿಯಾಗಿರುವ (Krishna Janmashtami) ಇವತ್ತು ಅವರು ಹಿರಿಯೂರು ಕ್ಷೇತ್ರದ ಮಾಜಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರನ್ನು (Poornima Srinivas) ನಗರದ ಕೆಆರ್ ಪುರಂನ ದೇವಸಂದ್ರದಲ್ಲಿರುವ ಅವರ ಪೂರ್ಣಿಮಾ ನಿವಾಸದಲ್ಲಿ ಭೇಟಿಯಾದರು. ಕೇವಲ ಭೇಟಿ ಮಾತ್ರ ಅಲ್ಲ, ಶಾಸಕಿಯ ಮನೆಯಲ್ಲಿ ಹಬ್ಬದೂಟವನ್ನೂ ಸವಿದರು. ಶಿವಕುಮಾರ್ ಬಾಯಿ ಚಪ್ಪರಿಸುತ್ತಾ ಊಟ ಮಾಡೋದ್ರಲ್ಲಿ ಮಗ್ನರಾಗಿದ್ದಾಗ ಪೂರ್ಣಿಮಾ ಉಪ ಮುಖ್ಯಮಂತ್ರಿಯ ಪಕ್ಕದಲ್ಲೇ ಕೂತಿದ್ದರು. ಶಿವಕುಮಾರ್ ಸುತ್ತ ನೆರೆದಿರುವ ಪೂರ್ಣಿಮಾ ಕುಟುಂಬದ ಸದಸ್ಯರು ಅವರು ಈಟ ಮಾಡುವುದನ್ನು ನೋಡುತ್ತಿದ್ದರು. ಕಾಂಗ್ರೆಸ್ ನಾಯಕ ಮಾತ್ರ ಯಾವುದೇ ಸಂಕೋಚವಿಲ್ಲದೆ ಆರಾಮವಾಗಿ ಊಟ ಮಾಡಿದರು. ಭೇಟಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ