ಬೆಂಗಳೂರು: ಫಾರ್ ಎ ಚೇಂಜ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಸೂಟುಧಾರಿಯಾಗಿದ್ದರು. ಎಐಸಿಸಿಯಿಂದ ಸತ್ಯ ಶೋಧನಾ ಸಮಿತಿ ಬಂದಿರುವ ಬಗ್ಗೆ ಮಾತಾಡಿದ ಅವರು, ನಿನ್ನೆಯಂತೆ ಇವತ್ತು ಸಹ ಸಮಿತಿ ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಸೋತವರು ಗೆದ್ದವರು ಮತ್ತು ರಾಜ್ಯದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯವರು ಸಹ ಮಧ್ಯಾಹ್ನವೇ ಸಮಿತಿಯೊಂದಿಗೆ ಮಾತಾಡಬೇಕಿತ್ತು, ಕಾರಣಾಂತರಗಳಿಂದ ಬರಲಾಗಿಲ್ಲ, ಅದರೆ ಸಮಿತಿ ಸದಸ್ಯರು ವಾಪಸ್ಸು ಹೋಗುವ ಮೊದಲು ಸಿಎಂ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದರು. ಇಲ್ಲಿಯ ಎಲ್ಲ ವಿದ್ಯಮಾನಗಳ ಬಗ್ಗೆ ಅವರು ಎಐಸಿಸಿಗೆ ವರದಿ ಸಲ್ಲಿಸಲಿದ್ದಾರೆ, ಮತ್ತು ಇಲ್ಲಿ ಅಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ದಿಶೆಯಲ್ಲಿ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಮುಡಾ ಬಗ್ಗೆ ಕೇಳಿದ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿದ ಶಿವಕುಮಾರ್, ಅದರಲ್ಲಿ ತಪ್ಪೇನಾಗಿದೆ? ಬಿಜೆಪಿಯವರೇ ನಡೆಸಿರುವ ಅವಾಂತರ ಅದು, ಅವರ ಎಲ್ಲ ಸವಾಲುಗಳಿಗೆ ಅಸೆಂಬ್ಲಿ ಅಧಿವೇಶನದಲ್ಲಿ ಉತ್ತರ ಕೊಡಲು ತಯಾರಿದ್ದೇವೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸರ್ಕಾರಕ್ಕೆ ಯಾವುದೇ ಅರ್ಥಿಕ ಸಂಕಷ್ಟವಿಲ್ಲ, ಎಲ್ಲವೂ ಸ್ಟ್ರೀಮ್ ಲೈನ್ ಆಗುತ್ತಿದೆ: ಡಿಕೆ ಶಿವಕುಮಾರ್