ಗ್ಯಾರಂಟಿ ಯೋಜನೆ; ರಾಮನಗರದಲ್ಲಿ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಖಡಕ್ ಟಾಂಗ್
5 ಗ್ಯಾರಂಟಿಗಳನ್ನ ಕೊಡುವ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ ಇಲ್ಲೋ, ಇದನ್ನ ಕುಮಾರಸ್ವಾಮಿಯವರು ಕೊಡ್ತೀದ್ರಾ ಎನ್ನುವ ಮೂಲಕ ರಾಮನಗರದಲ್ಲಿ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ರಾಮನಗರ: ನಾವು ಚುನಾವಣೆಗಿಂತ ಮೊದಲು ಐದು ಗ್ಯಾರೆಂಟಿಗಳಿಗೆ ಮಾತ್ ಕೊಟ್ಟಿದ್ವಿ, ಇದೀಗ ಎಲ್ಲಾ ಹೆಣ್ಮಕ್ಳು ಸರ್ಕಾರಿ ಬಸ್ಲ್ಲಿ ಓಡಾಡ್ತಾ ಇದೀರಲ್ಲ. ಈ ತಿಂಗಳಿನಿಂದ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ. ಮುಂದಕ್ಕೆ ನಿಮಗೆ ಸೊನ್ನೆ ಬಿಲ್ಲು. 10 ಕೆ.ಜಿ ಮಾತ್ ಕೊಟ್ಟಿದ್ದೊ ಈ ತಿಂಗಳಿನಿಂದ 5 ಕೆಜಿ ಕೊಡ್ತಾ ಇದ್ದೀವಿ, ಇನ್ನು 5 ಕೆ.ಜಿಗೆ ಹಣ ಕೊಡ್ತಾ ಇದ್ದೀವಿ. ಇನ್ನು 14 ನೇ ತಾರಿಖಿನಿಂದ ಭಾಗ್ಯದ ಲಕ್ಷ್ಮಿ ಬಾರಮ್ಮ ಆ ದೇವಿ ನಿಮಗೆ ಪ್ರತಿ ಹೆಣ್ಮಗಳಿಗೆ 2 ಸಾವಿರ ರೂ ಅಕೌಂಟಿಗೆ ಕೊಡುತ್ತಿದ್ದಾಳೆ. ಈ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ ಇಲ್ಲೋ, ಇದನ್ನ ಕುಮಾರಸ್ವಾಮಿ (Kumarswamy)ಯವರು ಕೊಡ್ತೀದ್ರಾ ಎನ್ನುವ ಮೂಲಕ ರಾಮನಗರದಲ್ಲಿ ಡಿಕೆ ಶಿವಕುಮಾರ್(DK shivakumar) ಟಾಂಗ್ ಕೊಟ್ಟಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us