ಚಿಕ್ಕಮಗಳೂರು: ಸೋರುತಿಹುದು ಕೆಎಸ್​ಆರ್​ಟಿಸಿ ಬಸ್, ಅಧಿಕಾರಿಗಳ ಅಜ್ಞಾನದಿಂದ ಎಂದ ಪ್ರಯಾಣಿಕರು​​

Edited By:

Updated on: Aug 25, 2024 | 9:43 AM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ರಾಜ್ಯದ ಜನರ ಜೀವನಾಡಿಯಾಗಿದೆ. ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಪ್ರತಿದಿನ ಅಸಂಖ್ಯ ಜನರು ಪ್ರಯಾಣ ಮಾಡುತ್ತಾರೆ. ದೊಡ್ಡಬಳ್ಳಾಪುರ ಡಿಪೋಗೆ ಸೇರಿದ ಕೆಎಸ್​ಆರ್​ಟಿಸಿ ಬಸ್ ಸೋರುತ್ತಿದ್ದು, ಪ್ರಯಾಣಿಕರು ಪರದಾಡಿದ ವಿಡಿಯೋ ವೈರಲ್​ ಆಗಿದೆ.

ಚಿಕ್ಕಮಗಳೂರು, ಆಗಸ್ಟ್​​ 25: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಬಸ್​ ಸೋರುತ್ತಿದೆ. ಸೋರುತ್ತಿರುವ ಕೆಎಸ್ಆರ್​ಟಿಸಿ ಬಸ್​​ನಲ್ಲೇ (Bus) ಜನರು ಪ್ರಯಾಣಿಸಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಸೋರುವ ಬಸ್​ನಲ್ಲಿ ಪ್ರಯಾಣಿಕರ ಪರದಾಟ ಹೇಳುತೀರದು. ಬೇಗ ನಮ್ಮ ನಿಲ್ದಾಣ ಬರಲಿ ಅಂತ ದೇವರಲ್ಲಿ ಪಾರ್ಥಿಸಿದರು.

ದೊಡ್ಡಬಳ್ಳಾಪುರ ಡಿಪೋಗೆ ಸೇರಿದ ಕೆಎಸ್​ಆರ್​ಟಿಸಿ ಬಸ್ ದೊಡ್ಡಬಳ್ಳಾಪುರದಿಂದ ಹೊರಟು ಹಾಸನ ಮಾರ್ಗವಾಗಿ ಹೊರನಾಡಿಗೆ ತಲುಪುತ್ತದೆ. ಈ ಬಸ್​ನಲ್ಲಿ ಮುಚ್ಚಿದ ಕಿಟಕಿಯ ಮೇಲಿನ ಸಂಧಿ, ಮುಚ್ಚಿದ ಬಾಗಿಲು ಮತ್ತು ಬಸ್​ನ ಮಾಳಿಗೆಯಿಂದ ಸೀಟ್​​ ಮೇಲೆ ನೀರು ಸೋರುತ್ತಿದೆ. ಸೀಟ್​​ ಮೇಲೆ ನೀರು ಬಿದ್ದಿರುವುದರಿಂದ ಪ್ರಯಾಣಿಕರು ನಿಂತು ಪ್ರಯಾಣ ಮಾಡಿದರು. ಇನ್ನು ಕೆಲವರು ನೀರು ಒರೆಸಿ ಅಲ್ಲೇ ಕೂತಿದ್ದರೆ, ಇನ್ನು ಕೆಲವರು ನೀರು ಬಿದ್ದ ಸೀಟು ಬಿಟ್ಟು ಪಕ್ಕದ ಸೀಟ್​ನಲ್ಲಿ ಕೂತು ಪ್ರಯಾಣ ಮಾಡಿದರು. ಸೋರುವ ಬಸ್ಸಿನಲ್ಲಿ ಪ್ರಯಾಣಿಕರ ಪರದಾಟ ಹೇಳತೀರದು.

ಇದನ್ನೂ ಓದಿ: ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಸುಳಿವು ನೀಡಿದ ಸಚಿವ ರಾಮಲಿಂಗಾ ರೆಡ್ಡಿ: ಬಿಜೆಪಿ ವಿರುದ್ಧ ವಾಗ್ದಾಳಿ

ಸೋರುತ್ತಿರುವ KSRTC ಬಸ್​

ಕೆಎಸ್​ಆರ್​ಟಿ ಬಸ್​ ಪರಿಸ್ಥಿತಿಯನ್ನು ಕಾಲೇಜು ವಿದ್ಯಾರ್ಥಿಯೊಬ್ಬ ವಿಡಿಯೋ ಮೂಲಕ ವಿವರಿಸಿದ್ದು, ಮಳೆಯಿಂದ ಬಸ್​ ಸೋರುತ್ತಿದೆ. ಸೀಟ್​​ ಮೇಲೆ ನೀರು ಬಿದ್ದಿದೆ. ಯಾವ ಸೀಟ್​ ಮೇಲೆ ಕೂತು ಪ್ರಯಾಣ ಮಾಡಬೇಕು ಎಂಬುವುದು ನಮಗೆ ಗೊಂದಲವಾಗಿದೆ. ಸಾರಿಗೆ ಅಧಿಕಾರಿಗಳೆ ನಮಗೆ ದಯವಿಟ್ಟು ತಿಳಿಸಿ ಯಾವ ಸೀಟ್​ ಮೇಲೆ ಕೂರಬೇಕೆಂದು. ದಿನನಿತ್ಯ ಇದೇ ಗೋಳು ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More