ವೈದ್ಯೆಯ ಕೊಲೆ ಪ್ರಕರಣ: ಕೋಟಿ ರೂ. ಬೆಲೆಯ ಮನೆ ಆಶ್ರಮಕ್ಕೆ ಕೊಟ್ಟ ಪೋಷಕರು
ಡಾ. ಕೃತಿಕಾ ಅವರ ಕೊಲೆ ಪ್ರಕರಣ ಆರು ತಿಂಗಳ ನಂತರ ಬೆಳಕಿಗೆ ಬಂದ ಬೆನ್ನಲ್ಲೇ, ಕೊಲೆ ಸಂಬಂಧ ವಿವಿಧ ರೀತಿಯ ಮಾಹಿತಿಗಳು ಕೂಡ ಬಹಿರಂಗವಾಗುತ್ತಿವೆ. ಸದ್ಯ, ಆಕೆ ವಾಸಿಸುತ್ತಿದ್ದ ಕೋಟಿ ರೂ. ಬೆಲೆಬಾಳುವ ಮನೆಯನ್ನುಇಸ್ಕಾನ್ನವರಿಗೆ ದಾನ ಮಾಡಿರುವುದಾಗಿ ಆಕೆಯ ಸಹೋದರಿ ಡಾ. ನಿಖಿತಾ ತಿಳಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನಲ್ಲಿ ವೈದ್ಯ ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪ್ರಕರಣ 6 ತಿಂಗಳ ನಂತರ ಬೆಳಕಿಗೆ ಬಂದಿದ್ದು, ಒಂದೊಂದೇ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ಇದೀಗ ಕೃತಿಕಾ ಕುಟುಂಬದವರು ಆಕೆಯ ಸಮಾಜ ಸೇವಾ ಕನಸುಗಳನ್ನು ಕೂಡ ನೆನಪಿಸಿಕೊಂಡಿದ್ದು, ಈ ಕಾರಣಕ್ಕಾಗಿಯೇ ಆಕೆ ವಾಸಿಸುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಮನೆಯನ್ನು ಇಸ್ಕಾನ್ನವರ ಆಶ್ರಮಕ್ಕೆ ದಾನ ಮಾಡಿರುವುದಾಗಿ ಸಹೋದರಿ ಡಾ. ನಿಖಿತಾ ತಿಳಿಸಿದ್ದಾರೆ. ಆ ಮನೆಯಲ್ಲಿ ಇರುವುದು ನಮ್ಮಿಂದಾಗದು. ಆದ್ದರಿಂದ ದೇವರಿಗೆ ಸಮರ್ಪಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
Loading...
Unable to load recommendations.
Follow Us
