ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಶ್ಚಲ ಸ್ಥಿತಿಯಲ್ಲಿದ್ದ ಲಾರಿಗೆ ಗುದ್ದಿದ ಕ್ಯಾಂಟರ್ ಚಾಲಕ  ಕ್ಯಾಬಿನ್​ನಲ್ಲಿ ಸಿಲುಕಿಕೊಂಡ 

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Dec 03, 2022 | 12:16 PM

ಅಪಘಾತ ಸಂಭವಿಸಿದ್ದು ಮಂಡ್ಯ ನಗರಕ್ಕೆ ಹತ್ತಿರದ ಗೆಜ್ಜಲಗೆರೆ ಬಳಿ. ಸ್ಥಳೀಯರು ನುಜ್ಜುಗುಜ್ಜಾಗಿದ್ದ ಕ್ಯಾಬಿನಿಂದ ಹರಸಾಹಸಪಟ್ಟು ಚಾಲಕನನ್ನು ಹೊರತಂದಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವ್ಹೈಟ್ ಟ್ಯಾಪಿಂಗ್ ಕೆಲಸದಲ್ಲಿ ನಿರತವಾಗಿದ್ದ ಲಾರಿಯೊಂದರ ಹಿಂಬದಿಗೆ ರಭಸವಾಗಿ ಕ್ಯಾಂಟರ್ ಗುದ್ದಿದ ಬಳಿಕ ಅದರ ಚಾಲಕ ವಾಹನದ ಕ್ಯಾಬಿನಲ್ಲಿ ಸಿಲುಕಿಕೊಂಡ ಪ್ರಸಂಗ ಶುಕ್ರವಾರ ನಡೆದಿದೆ. ಅಪಘಾತ ಸಂಭವಿಸಿದ್ದು ಮಂಡ್ಯ ನಗರಕ್ಕೆ ಹತ್ತಿರದ ಗೆಜ್ಜಲಗೆರೆ ಬಳಿ. ಸ್ಥಳೀಯರು ನುಜ್ಜುಗುಜ್ಜಾಗಿದ್ದ ಕ್ಯಾಬಿನಿಂದ ಹರಸಾಹಸಪಟ್ಟು ಚಾಲಕನನ್ನು ಹೊರತಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact

TV9 Kannada

Read More