Dangerous travel: ಉಡುಪಿ ಬಳಿಯ ಹೆದ್ದಾರಿಯಲ್ಲಿ ಟಾಪ್ ಮೇಲೆ ಜನರನ್ನು ಕೂರಿಸಿಕೊಂಡು ಅಪಾಯಕಾರಿಯಾಗಿ ಚಲಿಸಿದ ಕ್ರೂಸರ್ ಬಾಗಲಕೋಟೆಯದ್ದೇ?

ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2023 | 2:12 PM

ಈ ವಾಹನ ಎಲ್ಲಿಂದಾದರೂ ಹೊರಟಿರಲಿ; ರಸ್ತೆಯಲ್ಲಿ ಚೆಕ್ ಪೋಸ್ಟ್ ಅಗಲಿ, ಅಥವಾ ಪೊಲೀಸರಾಗಲಿ ಸಿಗಲೇ ಇಲ್ಲವೇ?

ಉಡುಪಿ: ಇಂಥ ದೃಶ್ಯಗಳು ಕೇವಲ ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಮಾತ್ರ ಕಾಣಿಸುತ್ತವೆ ಅಂತ ಯಾರಾದರೂ ಅಂದುಕೊಂಡರೆ ಅವರ ಊಹೆ ತಪ್ಪು. ಆಫ್ ಕೋರ್ಸ್, ವಿಡಿಯೋದಲ್ಲಿ ಕಾಣುತ್ತಿರುವ ವಾಹನ ಉತ್ತರ ಕರ್ನಾಟಕದ್ದೇ, ಬಾಗಲಕೋಟೆ ಅರ್ ಟಿಓ (Bagalkot RTO) ಪಾಸಿಂಗ್ ನಂಬರ್ (ಕೆಎ 29) ನಿಚ್ಚಳವಾಗಿ ಕಾಣುತ್ತದೆ. ಆದರೆ ಟಾಪ್ ಮೇಲೆ ಜನರನ್ನು ಕೂರಿಸಿಕೊಂಡು ಚಲಿಸುತ್ತಿರುವ ಕ್ರೂಸರ್ ವಾಹನ ಉಡುಪಿ ಜಿಲ್ಲೆ ಮೂಲಕ ಹಾದುಹೋಗುವ ಮುಳೂರು ಹೆದ್ದಾರಿಯಲ್ಲಿ (Mulur highway) ಅಪಾಯಕಾರಿಯಾಗಿ ಸಾಗುತ್ತಿದೆ. ಒಂದು ಪಕ್ಷ ಇದು ಬಾಗಲಕೋಟೆಯಿಂದಲೇ ಹೊರಟಿದ್ದರೆ ಇಷ್ಟು ದೂರದವರೆಗೆ ಜನ ಹೀಗೆ ನೇತಾಡಿಕೊಂಡೇ ಪ್ರಯಾಣಿಸಿದರೇ. ಪೂರ್ತಿ ಹಿಂದಿನವನನ್ನು ನೋಡಿ, ಸ್ಟೆಪ್ನಿ ಮೇಲೆ ಓಲಾಡುತ್ತಾ ಕೂತಿದ್ದಾನೆ! ಸೋಜಿಗ ಹುಟ್ಟಿಸುವ ಸಂಗತಿಯೇನೆಂದರೆ, ಈ ವಾಹನ ಎಲ್ಲಿಂದಾದರೂ ಹೊರಟಿರಲಿ; ರಸ್ತೆಯಲ್ಲಿ ಚೆಕ್ ಪೋಸ್ಟ್ ಅಗಲಿ, ಅಥವಾ ಪೊಲೀಸರಾಗಲಿ ಸಿಗಲೇ ಇಲ್ಲವೇ? ಅಂದಹಾಗೆ, ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.