ಶಿವಮೊಗ್ಗದಲ್ಲಿ ಚುನಾವಣೆ ಗೆಲ್ಲಲು ಈಶ್ವರಪ್ಪ ಗೇಮ್​ಪ್ಲಾನ್ ಏನು? ಇಲ್ಲಿದೆ ಸ್ಪೆಷಲ್ ರಿಪೋರ್ಟ್

|

Updated on: May 03, 2024 | 6:41 PM

KS Eshwarappa special interview with TV9: ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಮ್ಮ ಮಗ ಕಾಂತೇಶ್​ಗೆ ಸಿಗಬೇಕೆಂದು ಈಶ್ವರಪ್ಪ ಬಯಸಿದ್ದರು. ಆದರೆ, ಅದು ಆಗಲಿಲ್ಲ. ಇದಕ್ಕೆ ಯಡಿಯೂರಪ್ಪ ಕಾರಣ ಎಂದು ಸಿಟ್ಟುಕೊಂಡಿರುವ ಈಶ್ವರಪ್ಪ ಶಿವಮೊಗ್ಗದಲ್ಲಿ ಬಂಡಾಯ ಎದ್ದು ಪಕ್ಷೇತರರಾಗಿ ಬಿ.ವೈ. ರಾಘವೇಂದ್ರ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪರ ಮಗನಿಗೆ ಈಶ್ವರಪ್ಪ ಮಗ್ಗುಲ ಮುಳ್ಳಾಗುತ್ತಾರಾ ಗೊತ್ತಿಲ್ಲ. ಅವರ ವಿಶೇಷ ಸಂದರ್ಶನ ಇಲ್ಲಿದೆ...

ಶಿವಮೊಗ್ಗ, ಮೇ 3: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಕರ್ನಾಟಕದಲ್ಲಿ ಕುತೂಹಲ ಮೂಡಿಸಿರುವ ಹಣಾಹಣಿಯಲ್ಲಿ ಶಿವಮೊಗ್ಗವೂ (Shivamogga) ಒಂದು. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ನಾಯಕರಲ್ಲಿ ಒಬ್ಬರಾದ ಈಶ್ವರಪ್ಪ (KS Eshwarappa) ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ. ರಾಘವೇಂದ್ರ, ಕಾಂಗ್ರೆಸ್​ನಿಂದ ಗೀತಾ ಶಿವರಾಜಕುಮಾರ್ ಮತ್ತು ಪಕ್ಷೇತರರಾಗಿ ಈಶ್ವರಪ್ಪ ನಡುವೆ ತ್ರಿಕೋನ ಸ್ಪರ್ಧೆ ಇದೆ. ಈಗಲೂ ನರೇಂದ್ರ ಮೋದಿಯ ಭಕ್ತ ಎಂದು ಹೇಳಿಕೊಳ್ಳುವ ಈಶ್ವರಪ್ಪ ತಮ್ಮ ಸಿಟ್ಟೇನಿರುವುದು ಯಡಿಯೂರಪ್ಪನವರ ಕುಟುಂಬ ಆಳ್ವಿಕೆ ಬಗ್ಗೆ ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಟಿವಿ9 ಕನ್ನಡ ಈ ವೇಳೆ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಸ್ಪೆಷಲ್ ಸಂದರ್ಶನ ಮಾಡಿದೆ. ಅದರ ವಿಡಿಯೋ ಇಲ್ಲಿದೆ.

ಕೇಂದ್ರದಲ್ಲಿ ಮೋದಿ, ಶಿವಮೊಗ್ಗದಲ್ಲಿ ಹಿಂದುತ್ವವಾದಿ ಎನ್ನುವ ಸ್ಲೋಗನ್ ಸೃಷ್ಟಿಯಾಗಿದೆ. ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ನಿಂತಿದ್ದರೂ ಅವರು ಹಿಂದುತ್ವ ಬಿಟ್ಟಿಲ್ಲ. ಇನ್ನಷ್ಟು ಹರಿತ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಹಿಂದುತ್ವ ವರ್ಸಸ್ ಹಿಂದುತ್ವ ಎಂಬ ಕೇಳಿಬರುತ್ತಿರುವ ಮಾತನ್ನು ತಳ್ಳಿಹಾಕುವ ಈಶ್ವರಪ್ಪ, ಇದು ಹಿಂದುತ್ವ ವರ್ಸಸ್ ಜಾತಿವಾದ ಎಂದು ಬಣ್ಣಿಸುತ್ತಾರೆ. ಕಾಂಗ್ರೆಸ್​ನವರು ತಾವು ಈಡಿಗರ ಪರ ಎನ್ನುತ್ತಾರೆ. ರಾಘವೇಂದ್ರ ಲಿಂಗಾಯತ ಪರ ಎನ್ನುತ್ತಾರೆ. ತಾನು ಎಲ್ಲಾ ವರ್ಗದ ಪರ ಇದ್ದೇನೆ ಎನ್ನುತ್ತಾರೆ.

ಇದನ್ನೂ ಓದಿ: ಬಿಜೆಪಿ ಮೈತ್ರಿ ನಂಗೆ ಮುಖ್ಯ ಅಲ್ಲ; ಶಾಕಿಂಗ್ ಹೇಳಿಕೆ ಕೊಟ್ಟ ಕುಮಾರಸ್ವಾಮಿ

ಇನ್ನು, ಯಡಿಯೂರಪ್ಪ ಬಗ್ಗೆ ತನಗೇನೂ ವೈಯಕ್ತಿಕವಾಗಿ ಕೋಪ ಇಲ್ಲ. ಆದರೆ, ಅವರು ಮಕ್ಕಳಿಗೆ ಎಲ್ಲವೂ ಸಿಗಬೇಕೆಂದು ಹೊರಟಿದ್ದಾರೆ. ಎಲ್ಲವೂ ಅಪ್ಪ ಮತ್ತು ಮಕ್ಕಳ ಕೈಯಲ್ಲೇ ಇರಬೇಕೆಂದು ಬಯಸುತ್ತಾರೆ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow us on