ಚಿಕ್ಕಬಳ್ಳಾಪುರ: ಭೂಕಂಪದ ಭೀತಿಯ ಅಲೆಗಳು ಇನ್ನೂ 1 ತಿಂಗಳಿರುವ ಸಾಧ್ಯತೆ, ತಜ್ಞರು ಹೇಳೋದೇನು?

Edited By: ಸಾಧು ಶ್ರೀನಾಥ್​

Updated on: Dec 24, 2021 | 11:18 AM

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹಾಗೂ ಅಡ್ಡಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಲ್ಲಿ ಮೂರು ಭಾರಿ ಭೂ ಕಂಪನವಾದ ಹಿನ್ನಲೆ ತಾಲೂಕಿನ ಬಂಡಹಳ್ಳಿ ಗ್ರಾಮದ ಜನ ಭಯ ಭೀತರಾಗಿದ್ದು, ಬಿರುಕು ಬಿಟ್ಟ ಮನೆಗಳನ್ನು ತೊರೆದು ಬೇರೆ ಊರುಗಳ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ಚಿಕ್ಕಬಳ್ಳಾಪುರ: ಮೂರನೆ ಭಾರಿಗೆ ನಿನ್ನೆ ಚಿಕ್ಕಬಳ್ಳಾಫುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಭೂಕಂಪವಾದ ಹಿನ್ನೆಲೆ ತಾಲೂಕಿನ ಶೆಟ್ಟಿಗೆರೆ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಇದ್ರಿಂದ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ದೈರ್ಯ ತುಂಬಿದ್ರು.

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹಾಗೂ ಅಡ್ಡಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಲ್ಲಿ ಮೂರು ಭಾರಿ ಭೂ ಕಂಪನವಾದ ಹಿನ್ನಲೆ ತಾಲೂಕಿನ ಬಂಡಹಳ್ಳಿ ಗ್ರಾಮದ ಜನ ಭಯ ಭೀತರಾಗಿದ್ದು, ಬಿರುಕು ಬಿಟ್ಟ ಮನೆಗಳನ್ನು ತೊರೆದು ಬೇರೆ ಊರುಗಳ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಆದ್ರೂ ಇನ್ನೂ ಕೆಲವರು ಬಿರಕು ಬಿಟ್ಟ ಮನೆಗಳಲ್ಲಿ ವಾಸ ಮಾಡ್ತಿದ್ದು ಮತ್ತೆ ಯಾವಾಗ ಭೂಕಂಪನ ಆಗುತ್ತೆ ಅನ್ನೊ ಭೀತಿಯಲ್ಲಿ ದಿನದೂಡತ್ತಿದ್ದಾರೆ. 50 ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗಿಲ್ಲ. ಈ ವರ್ಷ ಹಲವೆಡೆ ಮಹಾ ಮಳೆಯಾಗಿದೆ. ಮಳೆಯಿಂದ ಅಂತರ್ಜಲದಲ್ಲಿ ಬದಲಾವಣೆಯಾಗಿದೆ. ಭೂಕಂಪದ ಅಲೆಗಳು 1 ತಿಂಗಳಿರುವ ಸಾಧ್ಯತೆ

Published on: Dec 24, 2021 09:56 AM
Follow Us
Web contact

TV9 Kannada

Read More