ಮುರುಗೇಶ್ ಪಾಳ್ಯದ ಬಳಿ ಬಿಎಂಟಿಸಿ ಬಸ್ ಹರಿದು ಇಬ್ಬರ ಸಾವು, ಪ್ರತ್ಯಕ್ಷದರ್ಶಿಗಳು ಹೇಳೋದೇನು?
ಅಪಘಾತದಲ್ಲಿ ದುರ್ಮರಣಕ್ಕೀಡಾದ ಪಾದಾಚಾರಿ ಜಿಮ್ ನಿಂದ ಮನೆಗೆ ವಾಪಸ್ಸಾಗುತ್ತಿದ್ದರೆ ಬೈಕ್ ಓಡಿಸುತ್ತಿದ್ದ ವ್ಯಕ್ತಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರೆಂದು ಹೇಳಲಾಗಿದೆ. ಸಿಗ್ನಲ್ ಬಳಿಯೇ ಇಷ್ಟು ಭೀಕರ ಅಪಘಾತ ಜರುಗಿರುವುದು ಆಶ್ಚರ್ಯ ಮೂಡಿಸುತ್ತದೆ. ಅಪಘಾತ ನಡೆದ ತಕ್ಷಣ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಂಗಳೂರು, ಮಾರ್ಚ್ 27: ಕಳೆದ ರಾತ್ರಿ ಏರ್ಪೋರ್ಟ್ ರಸ್ತೆಯ ಮುರುಗೇಶ್ ಪಾಳ್ಯದ ಸಿಗ್ನಲ್ ಬಳಿ ನಡೆದ ಅಫಘಾತವೊಂದರಲ್ಲಿ ಬಿಎಂಟಿಸಿ ಬಸ್ ಹರಿದು ಒಬ್ಬ ಪಾದಾಚಾರಿ ಮತ್ತು ಒಬ್ಬ ಬೈಕ್ ಸವಾರ (biker) ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಬಸ್ಸಿನ ಡ್ರೈವರ್ ಬ್ರೇಕ್ ಅದುಮಿ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದರೂ ಬ್ರೇಕ್ ಹತ್ತಿಲ್ಲ. ಹೊಸದಾಗಿ ಆಪರೇಟ್ ಆಗುತ್ತಿರುವ ಎಲೆಕ್ಟ್ರಿಕ್ ಬಸ್ಗಳಲ್ಲಿ ಏರ್ ಕಂಪ್ರೆಸರ್ ಬ್ರೇಕ್ ಅಳವಡಿಕೆಯಾಗಿರುವುದರಿಂದ ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹಿಡಿಯಲ್ಲ ಎಂದು ಖುದ್ದು ಡ್ರೈವರ್ ಆಗಿರುವ ಒಬ್ಬ ಪ್ರತ್ಯಕ್ಷದರ್ಶಿ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು
Published on: Mar 27, 2025 10:27 AM