ಉಡುಪಿ ಬಳಿ ಗಂಗೊಳ್ಳಿ ಬಂದರಿನಲ್ಲಿ ಬೆಂಕಿ ದುರಂತ; ಲಂಗರು ಹಾಕಿದ್ದ 7 ಬೋಟ್​ಗಳು ಸುಟ್ಟು ಭಸ್ಮ

ಸ್ಳಳೀಯರೊಬ್ಬರು ಹೇಳುವ ಪ್ರಕಾರ ಒಂದು ಬೋಟ್, ಅದರಲ್ಲಿನ ಬಲೆ ಹಾಗೂ ಇತರ ಸಲಕರಣೆಗಳ ಒಟ್ಟು ಬೆಲೆ ಕನಿಷ್ಟ ರೂ. 70 ಲಕ್ಷಗಳಷ್ಟಾಗುತ್ತದೆ. ಏಳು ಬೋಟ್ ಗಳು ಸುಟ್ಟು ಹೋಗಿದ್ದರೆ, ಏನಿಲ್ಲವೆಂದರೂ 5 ಕೋಟಿ ರೂ. ಗಳ ಹಾನಿಯುಂಟಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೋಟು ಕಳೆದುಕೊಂಡಿರುವ ಮೀನುಗಾರರಿಗೆ ನೆರವಾಗುತ್ತಾರೆಯೇ?

ಉಡುಪಿ ಬಳಿ ಗಂಗೊಳ್ಳಿ ಬಂದರಿನಲ್ಲಿ ಬೆಂಕಿ ದುರಂತ; ಲಂಗರು ಹಾಕಿದ್ದ 7 ಬೋಟ್​ಗಳು ಸುಟ್ಟು ಭಸ್ಮ
|

Updated on: Nov 13, 2023 | 5:38 PM

ಉಡುಪಿ: ಇವತ್ತು ಬೆಳಗಿನ ಜಾವ ಬೆಂಗಳೂರು ನಗರದ ಬಾಣಸವಾಡಿಯಲ್ಲಿ ಬೆಂಕಿ ದುರಂತ (fire mishap) ಸಂಭವಿಸಿದ್ದರೆ, ಇಂದೇ ಬೆಳಗ್ಗೆ ಸುಮಾರು 9 ಗಂಟೆಗೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಬಂದರಿನಲ್ಲಿಯೂ ಅಗ್ನಿ ಅವಗಢ ಜರುಗಿ 7-8 ಮೀನು ಹಿಡಿಯಲು ಉಪಯೋಗಿಸುವ ಬೋಟ್​ಗಳು (fishing boats) ಬೆಂಕಿಗಾಹುತಿಯಾಗಿವೆ. ತೀರದಲ್ಲಿ ಲಂಗರು ಹಾಕಿದ್ದ ಬೋಟೊಂದಕ್ಕೆ (anchored boat) ಬೆಂಕಿ ತಗುಲಿ ಜೋರಾಗಿ ಗಾಳಿ ಬೀಸುತ್ತಿದ್ದ ಕಾರಣ ಬೆಂಕಿ ಪಕ್ಕದಲ್ಲಿದ್ದ ಬೋಟ್ ಗಳಿಗೂ ವ್ಯಾಪಿಸಿ 7 ನಾವೆಗಳು ಸುಟ್ಟು ಭಸ್ಮವಾಗಿವೆ ಎಂದು ಟಿವಿ9 ಉಡುಪಿ ವರದಿಗಾರ ಮತ್ತು ಸ್ಥಳೀಯರು ಸಹ ಹೇಳುತ್ತಾರೆ. ಅಗ್ನಿ ಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿದರೂ, ಅಷ್ಟರಲ್ಲಾಗಲೇ ಬೋಟುಗಳು ಉರಿದು ಭಸ್ಮಗೊಂಡಿದ್ದವಂತೆ. ಸ್ಳಳೀಯರೊಬ್ಬರು ಹೇಳುವ ಪ್ರಕಾರ ಒಂದು ಬೋಟ್, ಅದರಲ್ಲಿನ ಬಲೆ ಹಾಗೂ ಇತರ ಸಲಕರಣೆಗಳ ಒಟ್ಟು ಬೆಲೆ ಕನಿಷ್ಟ ರೂ. 70 ಲಕ್ಷಗಳಷ್ಟಾಗುತ್ತದೆ. ಏಳು ಬೋಟ್ ಗಳು ಸುಟ್ಟು ಹೋಗಿದ್ದರೆ, ಏನಿಲ್ಲವೆಂದರೂ 5 ಕೋಟಿ ರೂ. ಗಳ ಹಾನಿಯುಂಟಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೋಟು ಕಳೆದುಕೊಂಡಿರುವ ಮೀನುಗಾರರಿಗೆ ನೆರವಾಗುತ್ತಾರೆಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್