ಶಿಕ್ಷಣ ನಿಂತ ನೀರಲ್ಲ ಅದು ಬದುಕಿನ ನಿರಂತರ ಪ್ರಕ್ರಿಯೆ ಆಗಿದೆ: ಯಡಿಯೂರಪ್ಪ

Edited By:

Updated on: Jun 08, 2022 | 11:08 AM

ಆದರ್ಶ ರಾಷ್ಟ್ರೀಯ ಕಲ್ಪನೆ ಮತ್ತು ಸೃಜನಶೀಲತೆಯನ್ನು ಅಳವಡಿಸಿ ಇಡೀ ದೇಶಕ್ಕೆ ಏಕರೂಪ ಶಿಕ್ಷಣ ನೀತಿ ಜಾರಿಗೊಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದನಾರ್ಹರು ಎಂದು ಯಡಿಯೂರಪ್ಪ ಹೇಳಿದರು.

ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yediyurappa) ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಭಾಗದಿಂದ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಇಬ್ಬರು ಆಭ್ಯರ್ಥಿಗಳಿಗಾಗಿ ಬುಧವಾರ ಪ್ರಚಾರ ಮಾಡುವಾಗ ಹೊಸದಾಗಿ ರೂಪುಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ಕೊಂಡಾಡಿದರು. ಶಿಕ್ಷ ಯಾವತ್ತಿಗೂ ನಿಂತ ನೀರಲ್ಲ, ಅದು ಬದುಕಿನ ನಿರಂತರ ಪ್ರಕ್ರಿಯೆಯ ಭಾಗವಾಗಿದೆ, ಆದರ್ಶ ರಾಷ್ಟ್ರೀಯ ಕಲ್ಪನೆ ಮತ್ತು ಸೃಜನಶೀಲತೆಯನ್ನು ಅಳವಡಿಸಿ ಇಡೀ ದೇಶಕ್ಕೆ ಏಕರೂಪ ಶಿಕ್ಷಣ ನೀತಿ ಜಾರಿಗೊಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಭಿನಂದನಾರ್ಹರು ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
Web contact

TV9 Kannada

Read More