Video: ಅರಣ್ಯಾಧಿಕಾರಿಗಳ ಮುಂದೆ ದೊಡ್ಡದಾಗಿ ಬಾಯಿ ಬಿಟ್ಟ ದೈತ್ಯ ಹೆಬ್ಬಾವು
ಮೈಸೂರಿನ ನಂಜನಗೂಡು ತಾಲ್ಲೂಕಿನ ಮಹಾದೇವನಗರದ ಕೋಡಹಳ್ಳಿ ಬಳಿ ದೈತ್ಯ ಹೆಬ್ಬಾವು ಸೆರೆಹಿಡಿಯಲಾಗಿದೆ. ರೈತರ ಕುರಿ ಮತ್ತು ಮೇಕೆಗಳನ್ನು ನುಂಗಿ ಭಾರೀ ತೊಂದರೆ ನೀಡುತ್ತಿದ್ದ ಈ ಹೆಬ್ಬಾವು ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಮತ್ತು ಉರಗ ತಜ್ಞ ಸಂಜಯ್ ಸಹಕಾರದಿಂದ ಇದನ್ನು ರಕ್ಷಿಸಲಾಗಿದ್ದು, ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಹುಣಸೂರು ನಂತರ ಇದೇ ರೀತಿಯ ಘಟನೆ ಮೈಸೂರು ಭಾಗದಲ್ಲಿ ನಡೆದಿದೆ.
ಮೈಸೂರು, ಡಿ.5: ಹುಣಸೂರು ನಂತರ ನಂಜನಗೂಡು ತಾಲ್ಲೂಕಿನ ಮಹಾದೇವನಗರದ ಕೋಡಹಳ್ಳ ಸಮೀಪದಲ್ಲಿ ದೈತ್ಯ ಹೆಬ್ಬಾವನ್ನು ಸೆರೆಹಿಡಿಯಲಾಗಿದೆ. ರೈತರಲ್ಲಿ ಆತಂಕ ಸೃಷ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಉರಗ ತಜ್ಞ ಸಂಜಯ್ ರಕ್ಷಣೆ ಮಾಡಿದ್ದಾರೆ. ರೈತರು ಜಮೀನಿಗೆ ತೆರಳುತ್ತಿದ್ದ ವೇಳೆ ಈ ಹೆಬ್ಬಾವು ಕಾಣಿಸಿಕೊಂಡಿದೆ. ಇದೇ ಹೆಬ್ಬಾವು ಕುರಿ ಹಾಗೂ ಮೇಕೆಗಳನ್ನು ನುಂಗಿ ರೈತರಿಗೆ ಭಾರೀ ತೊಂದರೆಯನ್ನು ನೀಡುತ್ತಿತ್ತು. ಇದೀಗ ಹೆಬ್ಬಾವನ್ನು ಪತ್ತೆ ಮಾಡಿ ಸೆರೆ ಹಿಡಿಯಲಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Dec 05, 2025 04:23 PM