ಜೆಡಿಎಸ್-ಬಿಜೆಪಿ ಮೈತ್ರಿಗೆ ಹೆಚ್ ಡಿ ದೇವೇಗೌಡರ ಸಮರ್ಥನೆ ಆಶ್ಚರ್ಯ ಹುಟ್ಟಿಸುತ್ತದೆ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

|

Updated on: Sep 28, 2023 | 5:34 PM

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 5-6ರಷ್ಟು ಮುಸ್ಲಿಂ ವೋಟುಗಳು ಜೆಡಿಎಸ್ ಪಕ್ಷದ ಪರ ಚಲಾವಣೆಯಾಗಿವೆ. ಇನ್ನು ಮುಂದೆ ಅವು ಕಾಂಗ್ರೆಸ್ ಪಾಲಾಗಲಿವೆ ಎಂದು ಲಕ್ಷ್ಮಣ್ ಹೇಳಿದರು. ಮುಸ್ಲಿಂ ಸಮುದಾಯ ತಮ್ಮ ಪಕ್ಷದ ಮೇಲಿಟ್ಟಿದ್ದ ವಿಶ್ವಾಸಕ್ಕೆ ಹೆಚ್ ಡಿ ಕುಮಾರಸ್ವಾಮಿ ದ್ರೋಹವೆಸಗಿ ಅಧಿಕಾರದಲ್ಲಿದ್ದಾಗ ಮುಸಲ್ಮಾನರಿಗೆ ಇನ್ನಿಲ್ಲದ ಕಿರುಕುಳ ನೀಡಿದ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಎಂ ಲಕ್ಷ್ಮಣ್ ಹೇಳಿದರು.

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಎಂ ಲಕ್ಷ್ಮಣ್ (M Laxman) ಇಂದು ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡುವಾಗ ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಲೇವಡಿ ಮಾಡಿದರು. ಜೆಡಿಎಸ್ ನಿರ್ಧಾರದ ಬಗ್ಗೆ ಏನೂ ಹೇಳಲಾಗದು ಯಾಕೆಂದರೆ ಅದೊಂದು ಫ್ಯಾಮಿಲಿ ಟ್ರಸ್ಟ್! ಆದರೆ ಬಿಜೆಪಿ ಜೊತೆ ದೋಸ್ತಿಯನ್ನು ಏನೆಲ್ಲ ಕಾರಣ ನೆಪಗಳನ್ನು ಹೇಳುತ್ತಾ ಸಮರ್ಥನೆ ಮಾಡಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ನಿಲುವು ಸೋಜಿಗ ಹುಟ್ಟಿಸುತ್ತದೆ ಎಂದು ಲಕ್ಷ್ಮಣ್ ಹೇಳಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಾಹೇಬರಿಗೆ (CM Ibrahim) ಇನ್ನೂ ಗೊತ್ತಿಲ್ಲವೇ? ಅಸಲಿಗೆ ಅವರೆಲ್ಲಿದ್ದಾರೆ? ಮೈತ್ರಿಯ ಬಗ್ಗೆ ಇದುವರೆಗೆ ಒಂದು ಹೇಳಿಕೆಯನ್ನೂ ನೀಡಿಲ್ಲ, ಯಾಕೆ ಅಂತ ಲಕ್ಷ್ಮಣ್ ಕೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 5-6ರಷ್ಟು ಮುಸ್ಲಿಂ ವೋಟುಗಳು ಜೆಡಿಎಸ್ ಪಕ್ಷದ ಪರ ಚಲಾವಣೆಯಾಗಿವೆ. ಇನ್ನು ಮುಂದೆ ಅವು ಕಾಂಗ್ರೆಸ್ ಪಾಲಾಗಲಿವೆ ಎಂದು ಲಕ್ಷ್ಮಣ್ ಹೇಳಿದರು. ಮುಸ್ಲಿಂ ಸಮುದಾಯ ತಮ್ಮ ಪಕ್ಷದ ಮೇಲಿಟ್ಟಿದ್ದ ವಿಶ್ವಾಸಕ್ಕೆ ಹೆಚ್ ಡಿ ಕುಮಾರಸ್ವಾಮಿ ದ್ರೋಹವೆಸಗಿ ಅಧಿಕಾರದಲ್ಲಿದ್ದಾಗ ಮುಸಲ್ಮಾನರಿಗೆ ಇನ್ನಿಲ್ಲದ ಕಿರುಕುಳ ನೀಡಿದ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಎಂ ಲಕ್ಷ್ಮಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on