AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಹಂಚಿಕೆ ಮಾಡಿರೋ ಬಗ್ಗೆ ಯಾವುದೇ ಬೇಸರ ಇಲ್ಲ; ಇನ್ನೂ ಆನೆ ಬಲ ಬಂದಂತಾಗಿದೆ: ಡಾ ಸುಧಾಕರ್

ಸಾಧು ಶ್ರೀನಾಥ್​
|

Updated on: May 06, 2021 | 2:49 PM

ನಾನು ಕೊರೊನಾ ಯೋಧನ ರೀತಿಯಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದೇನೆ. ಈ ಸಮಯದಲ್ಲಿ ‌ನಾನು ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ. ಕೊರೊನಾ ಮುಗಿಯೋವರೆಗೂ ನಾನು ಯಾವ ಬೇಸರವನ್ನೂ ವ್ಯಕ್ತಪಡಿಸೊಲ್ಲ. ನನಗೆ ಯಾವ ಆಸೆಯೂ ಇಲ್ಲ. ಸರ್ಕಾರ ಮತ್ತು ಪಕ್ಷ ಕೊಡೋ ಆದೇಶದಂತೆ ಕೆಲಸ ಮಾಡ್ತೀನಿ.

ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿಕೆ. ಸಚಿವರಿಗೆ ಅಧಿಕಾರ ಹಂಚಿಕೆ ಮಾಡಿರೋ ವಿಚಾರ. ಅಧಿಕಾರ ಹಂಚಿಕೆ ಮಾಡಿರೋ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ನನಗೆ ಇನ್ನು ಒಳ್ಳೆಯದಾಯ್ತು. ನನಗೆ ಇನ್ನು ಆನೆ ಬಲ ಬಂದಂತೆ ಆಗಿದೆ. ಹಿರಿಯ ಸಚಿವರು ನನಗೆ ತುಂಬಾ ಸಹಕಾರ ಕೊಡ್ತಿದ್ದಾರೆ. ಎಲ್ಲರೂ ಅವ್ರ ಕೆಲಸ ಉತ್ತಮವಾಗಿ ಮಾಡ್ತಿದ್ದಾರೆ. ಎರಡು‌-ಮೂರು ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನ ಸರಿ ಮಾಡ್ತಾರೆ.

ನಾನು ಕೊರೊನಾ ಯೋಧನ ರೀತಿಯಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದೇನೆ. ಈ ಸಮಯದಲ್ಲಿ ‌ನಾನು ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ. ಕೊರೊನಾ ಮುಗಿಯೋವರೆಗೂ ನಾನು ಯಾವ ಬೇಸರವನ್ನೂ ವ್ಯಕ್ತಪಡಿಸೊಲ್ಲ. ನನಗೆ ಯಾವ ಆಸೆಯೂ ಇಲ್ಲ. ಸರ್ಕಾರ ಮತ್ತು ಪಕ್ಷ ಕೊಡೋ ಆದೇಶದಂತೆ ಕೆಲಸ ಮಾಡ್ತೀನಿ. ಯಾರ ವೈಯಕ್ತಿಕ ವಿಚಾರವನ್ನು ನಾನು ಮಾತಾಡೊಲ್ಲ. ಯಾರ ಬಗ್ಗೆಯೂ ನಾನು ಹಗುರವಾಗಿ ಮಾತಾಡೊಲ್ಲ. ರೇಣುಕಾಚಾರ್ಯ ಬಗ್ಗೆ ನನಗೆ ಈಗಲೂ ಗೌರವ ಇದೆ ಎಂದು ಮಾರ್ಮಿಕವಾಗಿ ಹೇಳಿದರು.
(health minister dr k sudhakar reacts to political secretary to cm yediyurappa mp renukacharya demand for his resignation)