‘ನನ್ನ ಖುಷಿಯಿಂದ ನೋಡಿಕೊಂಡ್ರೆ ಸಾಕು ಎಂದಿದ್ದೆ’; ನರೇಶ್ ಕೇಳಿದ್ದ ಮೊದಲ ಪ್ರಶ್ನೆಗೆ ಪವಿತ್ರಾ ಲೋಕೇಶ್ ಉತ್ತರ

Updated on: Jun 07, 2023 | 8:05 AM

‘ನರೇಶ್ ನನ್ನ ಬಳಿ ನಿನಗೆ ಏನು ಬೇಕು ಎಂದು ಕೇಳಿದರು. ನಾನು ಖುಷಿಯಿಂದ ಇರಬೇಕು. ವಿದೇಶ ಸುತ್ತಬೇಕು ಎಂದೆ. ನಾನು ಸಂತೋಷವಾಗಿದ್ದೇನೆ’ ಎಂದಿದ್ದಾರೆ ಪವಿತ್ರಾ ಲೋಕೇಶ್.

ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ ‘ಮತ್ತೆ ಮದುವೆ’ ಸಿನಿಮಾ ಜೂನ್ 9ರಂದು ಕರ್ನಾಟಕದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಇಬ್ಬರೂ ಪಾಲ್ಗೊಂಡಿದ್ದರು. ಈ ವೇಳೆ ಟಿವಿ9 ಕನ್ನಡ ಜೊತೆ ಪವಿತ್ರಾ ಲೋಕೇಶ್ (Pavitra Lokesh) ಮಾತನಾಡಿದ್ದಾರೆ. ‘ಅವರು ನನ್ನ ಬಳಿ ನಿನಗೆ ಏನು ಬೇಕು ಎಂದು ಮೊದಲು ಕೇಳಿದರು. ನಾನು ಖುಷಿಯಿಂದ ಇರಬೇಕು. ವಿದೇಶ ಸುತ್ತಬೇಕು ಎಂದೆ. ಅಂದಿನಿಂದ ನಾವು ಸಾಕಷ್ಟು ಕಡೆಗಳಲ್ಲಿ ಸುತ್ತಾಡುತ್ತಿದ್ದೇವೆ’ ಎಂದಿದ್ದಾರೆ ಪವಿತ್ರಾ ಲೋಕೇಶ್. ವಿಡಿಯೋದಲ್ಲಿ ಈ ವಿಷಯ 11ನೇ ನಿಮಿಷದಿಂದ ಆರಂಭ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us