ಬೆಂಗಳೂರು: ಮೊನ್ನೆ ಕೊನೆಗೊಂಡ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕಾಂಗ್ರೆಸ್ ನಾಯಕರನ್ನು (Congress leaders) ಬೇರೆ ಪಕ್ಷಗಳು ಪೋಚ್ ಮಾಡುವುದು ತಪ್ಪಿಸಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಬೆಂಗಳೂರುಗೆ ಕರೆತಂದು ರೆಸಾರ್ಟ್ ಗಳಲ್ಲಿ (resorts) ತಂಗಿಸಲಿರುವರೇ? ಮಾಧ್ಯಮ ಪ್ರತಿನಿಧಿಗಳು ಈ ಪ್ರಶ್ನೆ ಕೇಳಿದಾಗ ಶಿವಕುಮಾರ್ ಸ್ಪಷ್ಟ ಉತ್ತರ ನೀಡಲಿಲ್ಲ. ತಮ್ಮ ಕ್ಷೇತ್ರದ ಜನರೊಂದಿಗೆ ಬಹಳ ದಿನಗಳಿಂದ ಮಾತಾಡಿರದ ಕಾರಣ ಜನಸಂಪರ್ಕ ಇಟ್ಟುಕೊಂಡಿದ್ದು ಅಲ್ಲಿಗೆ ಹೋಗುತ್ತಿದ್ದ್ದೇನೆ ಅಂತ ಅವರು ಹೇಳಿದರು. ಅದಾದ ಮೇಲೆ 10-ದಿನ ಬೆಳಗಾವಿ ಅಧಿವೇಶನ ನಡೆಯಲಿದೆ ಎಂದು ಹೇಳಿದ ಶಿವಕುಮಾರ್, ಹೈದರಾಬಾದ್ ಗೆ ಹೋಗಬೇಕಿದೆ ಅಂತ ತಿಳಿಸಿದರು. ಪಕ್ಷದ ಹೈಕಮಾಂಡ್ ನೀಡುವ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ, ಅದಕ್ಕಾಗಿ ತೆಲಂಗಾಣಕ್ಕೆ ಹೋಗುವುದಾಗಿ ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ