Video: ಗುಡ್ಡಗಾಡು ಪ್ರದೇಶದಲ್ಲಿ ಜೀವನ ಕಟ್ಟಿಕೊಳ್ಳುವುದೊಂದು ಸವಾಲು, ವಿಪತ್ತು ಯಾವುದೇ ಕ್ಷಣದಲ್ಲೂ ಬರಬಹುದು

Updated on: Sep 09, 2025 | 10:16 AM

ಗುಡ್ಡಗಾಡಿನ ಪ್ರದೇಶದಲ್ಲಿ ಜೀವನ ಕಟ್ಟಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಹಲವು ಸಮಯದಲ್ಲಿ ಸುತ್ತಲಿರುವ ಹಸಿರು, ಪ್ರಕೃತಿಯನ್ನು ನೋಡಿ ನಾವೇ ಪುಣ್ಯವಂತರು ಎಂದೆನಿಸಿದರೂ, ಪ್ರಕೃತಿ ಮುನಿಸಿಕೊಂಡಾಗುವ ಅಪಾಯಗಳು, ಯಾರಾದರೂ ಇಲ್ಲಿದ್ದೀವೋ ಎನ್ನುವಷ್ಟರ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ, ಯಾವುದೇ ಕ್ಷಣದಲ್ಲಿ ವಿಪತ್ತು ಸಂಭವಿಸಬಹುದು. ಪೌರಿಯ ಬಗರ್ ಬರ್ಶಿಲಾದಲ್ಲಿ ಇತ್ತೀಚೆಗೆ ಸಂಭವಿಸಿದ ವಿಪತ್ತಿನ ಈ ವೀಡಿಯೊ ಇದಕ್ಕೆ ಪುರಾವೆಯಾಗಿದೆ. ಹೊಳೆ ಭೀಕರ ರೂಪವನ್ನು ಪಡೆದುಕೊಂಡಿತು, ಇದರಿಂದಾಗಿ ರಸ್ತೆ ಸಂಪೂರ್ಣವಾಗಿ ನಾಶವಾಯಿತು ಮತ್ತು ಮನೆಗಳ ಕೆಳಗೆ ಭೂಕುಸಿತಗಳು ಭಾರೀ ಹಾನಿಯನ್ನುಂಟುಮಾಡಿದವು. ಅದೃಷ್ಟವಶಾತ್, ಯಾವುದೇ ಜೀವಹಾನಿ ಸಂಭವಿಸಿಲ್ಲ, ಆದರೆ ಗ್ರಾಮಸ್ಥರು ಅಪಾರ ಆಸ್ತಿ ಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ನೀರು ಧುಮ್ಮಿಕ್ಕಿ ಹರಿಯುತ್ತಿರುವುದು ಹಾಗೂ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಓಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಗುಡ್ಡಗಾಡಿನ ಪ್ರದೇಶದಲ್ಲಿ ಜೀವನ ಕಟ್ಟಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಹಲವು ಸಮಯದಲ್ಲಿ ಸುತ್ತಲಿರುವ ಹಸಿರು, ಪ್ರಕೃತಿಯನ್ನು ನೋಡಿ ನಾವೇ ಪುಣ್ಯವಂತರು ಎಂದೆನಿಸಿದರೂ, ಪ್ರಕೃತಿ ಮುನಿಸಿಕೊಂಡಾಗುವ ಅಪಾಯಗಳು, ಯಾರಾದರೂ ಇಲ್ಲಿದ್ದೀವೋ ಎನ್ನುವಷ್ಟರ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ, ಯಾವುದೇ ಕ್ಷಣದಲ್ಲಿ ವಿಪತ್ತು ಸಂಭವಿಸಬಹುದು. ಪೌರಿಯ ಬಗರ್ ಬರ್ಶಿಲಾದಲ್ಲಿ ಇತ್ತೀಚೆಗೆ ಸಂಭವಿಸಿದ ವಿಪತ್ತಿನ ಈ ವೀಡಿಯೊ ಇದಕ್ಕೆ ಪುರಾವೆಯಾಗಿದೆ. ಹೊಳೆ ಭೀಕರ ರೂಪವನ್ನು ಪಡೆದುಕೊಂಡಿತು, ಇದರಿಂದಾಗಿ ರಸ್ತೆ ಸಂಪೂರ್ಣವಾಗಿ ನಾಶವಾಯಿತು ಮತ್ತು ಮನೆಗಳ ಕೆಳಗೆ ಭೂಕುಸಿತಗಳು ಭಾರೀ ಹಾನಿಯನ್ನುಂಟುಮಾಡಿದವು. ಅದೃಷ್ಟವಶಾತ್, ಯಾವುದೇ ಜೀವಹಾನಿ ಸಂಭವಿಸಿಲ್ಲ, ಆದರೆ ಗ್ರಾಮಸ್ಥರು ಅಪಾರ ಆಸ್ತಿ ಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ನೀರು ಧುಮ್ಮಿಕ್ಕಿ ಹರಿಯುತ್ತಿರುವುದು ಹಾಗೂ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More