ಬೆಂಗಳೂರು: ದರ್ಶನ್ ಬಗ್ಗೆ ಕೇಳುತ್ತಲೇ ಕೋಪಗೊಳ್ಳುತ್ತಿದ್ದ ಇಲ್ಲವೇ ಅಸಮಾಧಾನದಿಂದ ಉತ್ತರಿಸುತ್ತಿದ್ದ ಗೃಹಸಚಿವ ಜಿ ಪರಮೇಶ್ವರ್ ಇಂದು ಫಾರ್ ಎ ಚೇಂಜ್ ಮುಗಳ್ನಗುತ್ತ ಮಾತಾಡಿದರು. ದರ್ಶನ್ ರನ್ನು ಬಳ್ಳಾರಿಗೆ ಕಳಿಸಿದ್ದು ಅವರನ್ನು ನಿರಾಳವಾಗಿಸಿರಬಹುದು. ದರ್ಶನ್ ಜೊತೆ 8-10 ಕೈದಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ವರ್ಗಾಯಿಸಲಾಗಿದೆ, ಆ ನಿರ್ಧಾರಗಳನ್ನು ಜೈಲು ಅಧಿಕಾರಿಗಳು ತೆಗೆದುಕೊಂಡಿದ್ದಾರೆಯೇ ಹೊರತು ತನ್ನ ಅಥವಾ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Darshan Thoogudeepa: ಬಳ್ಳಾರಿ ಜೈಲು ಸೇರಿದ ದರ್ಶನ್ಗೆ ಹೊಸ ಕೈದಿ ಸಂಖ್ಯೆ