Horoscope Today: ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಮನ್ನಣೆ

Updated on: Apr 20, 2026 | 6:39 AM

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 20, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ತದಿಗೆ ತಿಥಿ, ಅಶ್ವಿನಿ ನಕ್ಷತ್ರ, ಆಯುಷ್ಮಾನ್ ಯೋಗ ಮತ್ತು ಕೌಲವ ಕರಣ ಒಳಗೊಂಡಿರುವ ವಿಶೇಷ ದಿನವಾಗಿದೆ. ಈ ದಿನವು ಅಕ್ಷಯ ತೃತೀಯ, ಬಸವ ಜಯಂತಿ ಮತ್ತು ಶಂಭೂರಿನಲ್ಲಿ ಸುಬ್ರಹ್ಮಣ್ಯ ಉತ್ಸವವನ್ನು ಆಚರಿಸುವ ಒಂದು ಮಹಾ ಪರ್ವ ದಿನವಾಗಿದೆ.

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 20, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ತದಿಗೆ ತಿಥಿ, ಅಶ್ವಿನಿ ನಕ್ಷತ್ರ, ಆಯುಷ್ಮಾನ್ ಯೋಗ ಮತ್ತು ಕೌಲವ ಕರಣ ಒಳಗೊಂಡಿರುವ ವಿಶೇಷ ದಿನವಾಗಿದೆ. ಈ ದಿನವು ಅಕ್ಷಯ ತೃತೀಯ, ಬಸವ ಜಯಂತಿ ಮತ್ತು ಶಂಭೂರಿನಲ್ಲಿ ಸುಬ್ರಹ್ಮಣ್ಯ ಉತ್ಸವವನ್ನು ಆಚರಿಸುವ ಒಂದು ಮಹಾ ಪರ್ವ ದಿನವಾಗಿದೆ.

ಅಕ್ಷಯ ತೃತೀಯ ಎಂದರೆ “ಕ್ಷಯವಿಲ್ಲದೆ ಇರುವುದು” ಎಂದರ್ಥ. ಈ ದಿನ ಕೈಗೊಳ್ಳುವ ಯಾವುದೇ ಶುಭ ಕಾರ್ಯಗಳು ಕ್ಷಯವಾಗದೆ ಅಭಿವೃದ್ಧಿಯನ್ನು ಕಾಣುತ್ತವೆ. ತ್ರೇತಾಯುಗದ ಪ್ರಾರಂಭ, ಗಂಗೆಯ ಅವತಾರ, ವೇದವ್ಯಾಸರು ಮಹಾಭಾರತ ರಚಿಸಿದ ದಿನ, ಕುಚೇಲನಿಗೆ ಶ್ರೀಕೃಷ್ಣನ ಅನುಗ್ರಹ, ಪಾಂಡವರಿಗೆ ಅಕ್ಷಯ ಪಾತ್ರೆ ಪ್ರಾಪ್ತಿ, ಮತ್ತು ಕುಬೇರನಿಗೆ ಮಹಾಲಕ್ಷ್ಮಿಯ ವರ ಸಿದ್ಧಿಯಾದ ಮಹತ್ವದ ದಿನ ಇದಾಗಿದೆ ಎಂದು ಗುರೂಜಿ ಹೇಳಿದ್ದಾರೆ.

 

 

 

 

Follow Us