ನಾನ್ಯಾಕೆ ಬೇರೆ ಧರ್ಮಕ್ಕೆ ಹೋಗಲಿ, ನನಗೆ ಮಾನವ ಧರ್ಮದ ಮೇಲೆ ಅಚಲ ನಂಬಿಕೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Feb 27, 2025 | 9:48 PM

ಕುಂಭಮೇಳ ಮತ್ತು ಜಾತಿಯ ನಡುವೆ ಎಲ್ಲಿಯ ಸಂಬಂಧ? ಇದು ಖಂಡಿತವಾಗಿಯೂ ಧರ್ಮದ ವಿಷಯವಲ್ಲ, ಪ್ರಯಾಗ್​ರಾಜ್ ನಂತರ ತಾನು ಟಿ ನರಸೀಪುರದ ಕುಂಭಮೇಳದಲ್ಲೂ ಭಾಗಿಯಾಗಿದ್ದೆ, ನಮ್ಮ ದೇಶ ಪವಿತ್ರ ನದಿಗಳ ನಾಡು, ನೀರಿಗೆ ಜಾತಿ, ಧರ್ಮವಿಲ್ಲ. ಮಹಾಕುಂಭಮೇಳವನ್ನು ಹೇಗೆ ಆಯೋಜಿಸಿದರು, ಗಂಗಾ ಅರತಿ ಹೇಗೆ ವ್ಯವಸ್ಥೆ ಮಾಡಿದರು ಅನ್ನೋದನ್ನೆಲ್ಲ ನೋಡ್ಕೊಂಡು ಬಂದಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಫೆ 27: ಹಿಂದೂ ಅಗಿ ಹುಟ್ಟಿದ್ದೇನೆ ಹಿಂದೂವಾಗೇ ಸಾಯ್ತೀನಿ ಅಂತ ಹೇಳಿರುವುದನ್ನು ಬಿಜೆಪಿ ಸ್ವಾಗತಿಸುತ್ತಿದೆ ಎಂದಿದ್ದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಧರ್ಮ ಬದಲಿಸುವಂಥ ಕೆಲಸಕ್ಕೆ ತಾನ್ಯಾಕೆ ಮುಂದಾಗಬೇಕು, ತನಗೆ ಮಾನವ ಧರ್ಮದ ಮೇಲೆ ವಿಶ್ವಾಸವಿದೆ, ವಿಶ್ವದಲ್ಲಿ ಶಾಂತಿ ನೆಲಸಲು ಮಾನವ ಧರ್ಮವೇ ಕಾರಣವಾಗುತ್ತದೆ ಎಂದು ಹೇಳಿದರು. ಧರ್ಮಕ್ಕಾಗಿ ಯಾರೂ ಅರ್ಜಿ ಗುಜರಾಯಿಸಿ ಹುಟ್ಟಲ್ಲ, ಧರ್ಮ ಅತ್ಯಂತ ವೈಯಕ್ತಿಕ ವಿಷಯ, ಡಾ ಬಿಅರ್ ಅಂಬೇಡ್ಕರ್ ಅವರು ಹಿಂದೂವಾಗಿ ಹುಟ್ಟಿ ಭೌದ್ಧ ಧರ್ಮಕ್ಕೆ ಮತಾಂತರಗೊಂಡರು, ಅದು ಅವರ ವೈಯಕ್ತಿವಾದ ವಿಷಯ, ಯಾರಾದರೂ ಪ್ರಶ್ನಿಸಲಾದೀತೆ ಎಂದು ಶಿವಕುಮಾರ್ ಕೇಳಿದರು. ತಾನು ಕುಂಭಮೇಳಕ್ಕೆ ಹೋಗುವುದನ್ನು ರಾಜಕೀಕರಣ ಮಾಡೋದು ಬೇಡ ಅಂತ ಮೊದಲೇ ಹೇಳಿದ್ದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾರೋ ಟ್ವೀಟ್ ಮಾಡಿದರೆ ನಾನು ಉತ್ತರ ಕೊಡಲ್ಲ, ಎದುರುಗಡೆ ಬಂದು ಮಾತಾಡಿದರೆ ಉತ್ತರಿಸುತ್ತೇನೆ: ಶಿವಕುಮಾರ್

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.