Karnataka Assembly Polls: ನನಗೆ ಟಿಕೆಟ್ ಸಿಗದಿರಲು ಕೇವಲ ಬಿಎಲ್ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್

|

Updated on: Apr 18, 2023 | 12:54 PM

ಕೇವಲ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸಲು ಪಕ್ಷವನ್ನು ಕಟ್ಟಿ ಬೆಳೆಸಿದ, 6 ಬಾರಿ ಶಾಸಕನಾಗಿ ಆಯ್ಕೆಯಾಗಿ ವಿವಿಧ ಸಾಮರ್ಥ್ಯಗಳಲ್ಲಿ ರಾಜ್ಯಕ್ಕೆ ಸೇವೆ ಸಲ್ಲಿಸಿದ ತಮಗೆ ಸಂತೋಷ್ ಹೀಗೆ ವಂಚಿಸಬಾರದಿತ್ತು ಎಂದು ಶೆಟ್ಟರ್ ಹೇಳಿದರು.

ಹುಬ್ಬಳ್ಳಿ: ಈ ಬಾರಿಯ ವಿಧಾನಸಭಾ ಚುಮಾವಣೆಯಲ್ಲಿ ಹುಬ್ಬಳ್ಳಿ ಕೇಂದ್ರ ಕ್ಷೇತ್ರದಿಂದ ಟಿಕೆಟ್ ಸಿಗದಿರಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಕಾರಣ ಎಂದು ನಿನ್ನೆ ಕಾಂಗ್ರೆಸ್ ಪಕ್ಷ ಸೇರಿದ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು. ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಇಂದು ಪತ್ರಿಕಾ ಗೋಷ್ಟಿ ಕರೆದು ಮಾತಾಡಿದ ಶೆಟ್ಟರ್, ಸಂತೋಷ್ ಗೆ ತಮ್ಮ ಮಾನಸ ಪುತ್ರ ಮಹೇಶ್ ತೆಂಗಿನಕಾಯಿಗೆ (Mahesh Tenginakai) ಟಿಕೆಟ್ ಕೊಡಿಸಬೇಕಿತ್ತು, ಹಾಗಾಗೇ ಅವರು ತಮ್ಮನ್ನು ಕಡೆಗಣಿಸುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು ಎಂದು ಶೆಟ್ಟರ್ ಅರೋಪಿಸಿದರು. 6 ತಿಂಗಳು ಮೊದಲೇ ತಮ್ಮ ವಿರುದ್ಧ ಪಿಸುಮಾತಿನ ಪ್ರಚಾರ ನಡೆಸಲಾಗುತಿತ್ತು ಎಂದ ಅವರು ಕೇವಲ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸಲು ಪಕ್ಷವನ್ನು ಕಟ್ಟಿ ಬೆಳೆಸಿದ, 6 ಬಾರಿ ಶಾಸಕನಾಗಿ ಆಯ್ಕೆಯಾಗಿ ವಿವಿಧ ಸಾಮರ್ಥ್ಯಗಳಲ್ಲಿ ರಾಜ್ಯಕ್ಕೆ ಸೇವೆ ಸಲ್ಲಿಸಿದ ತಮಗೆ ಸಂತೋಷ್ ಹೀಗೆ ವಂಚಿಸಬಾರದಿತ್ತು ಎಂದು ಶೆಟ್ಟರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on