Daily Devotional: ಯಾವ ದೈವ ಆರಾಧನೆಯ ವಿಧಾನ ಅನುಸರಿಸಿದ್ರೆ ಏನೇನು ಫಲ ಗೊತ್ತಾ?
ಯಾವ ದೈವ ಆರಾಧನೆಯ ವಿಧಾನ ಅನುಸರಿಸಿದ್ರೆ ಏನೇನು ಫಲ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಕುಲದೈವ, ಇಷ್ಟದೈವ, ಮನೆದೇವರು ಮತ್ತು ಆರಾಧ್ಯದೈವಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.ಕುಲದೈವವು ಏಳು ತಲೆಮಾರುಗಳಿಂದ ಕುಟುಂಬವನ್ನು ರಕ್ಷಿಸುವ ದೈವವಾಗಿದ್ದು, ಅನಾರೋಗ್ಯ, ಅಕಾಲಿಕ ಮರಣ, ಅಕಾಲಿಕ ಘಟನೆಗಳಿಂದ ವಂಶವನ್ನು ಕಾಪಾಡುತ್ತದೆ. ಪ್ರತಿದಿನ, ಕನಿಷ್ಠ ವಾರಕ್ಕೊಮ್ಮೆಯಾದರೂ ಕುಲದೈವವನ್ನು ಸ್ಮರಿಸುವುದು ಶುಭ.
ಯಾವ ದೈವ ಆರಾಧನೆಯ ವಿಧಾನ ಅನುಸರಿಸಿದ್ರೆ ಏನೇನು ಫಲ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಕುಲದೈವ, ಇಷ್ಟದೈವ, ಮನೆದೇವರು ಮತ್ತು ಆರಾಧ್ಯದೈವಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.ಕುಲದೈವವು ಏಳು ತಲೆಮಾರುಗಳಿಂದ ಕುಟುಂಬವನ್ನು ರಕ್ಷಿಸುವ ದೈವವಾಗಿದ್ದು, ಅನಾರೋಗ್ಯ, ಅಕಾಲಿಕ ಮರಣ, ಅಕಾಲಿಕ ಘಟನೆಗಳಿಂದ ವಂಶವನ್ನು ಕಾಪಾಡುತ್ತದೆ. ಪ್ರತಿದಿನ, ಕನಿಷ್ಠ ವಾರಕ್ಕೊಮ್ಮೆಯಾದರೂ ಕುಲದೈವವನ್ನು ಸ್ಮರಿಸುವುದು ಶುಭ.
ಇಷ್ಟದೈವವು ಮನಪೂರ್ವಕವಾಗಿ ಆರಾಧಿಸುವ ದೈವವಾಗಿದ್ದು, ಶೀಘ್ರ ಫಲ ಮತ್ತು ಇಷ್ಟಾರ್ಥಗಳನ್ನು ಈಡೇರಿಸುತ್ತದೆ. ಆರಾಧ್ಯದೈವವು ಜನ್ಮಜನ್ಮಾಂತರಗಳಿಂದ ಆರಾಧಿಸುವ ದೈವವಾಗಿದ್ದು, ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ. ಮನೆದೇವರು ಮೂರು ತಲೆಮಾರುಗಳಿಗೆ ಸೀಮಿತವಾದ ದೈವ. ಜಾತಕದ ಪಂಚಮ ಮತ್ತು ನವಮ ಸ್ಥಾನಗಳಿಗೆ ಅನುಗುಣವಾಗಿ ದೈವ ಆರಾಧನೆಯನ್ನು ಮಾಡುವುದರಿಂದ ಪೂರ್ವಜನ್ಮದ ಕರ್ಮಗಳ ಪ್ರಭಾವವನ್ನು ಅರ್ಥೈಸಿಕೊಳ್ಳಬಹುದು. ಎಲ್ಲಾ ನಂಬಿಕೆಯ ಆಧಾರದ ಮೇಲೆ ಸನ್ಮಂಗಳವನ್ನುಂಟುಮಾಡುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ
