ಶಿಮ್ಲಾ: ಹಿಮಾಚಲ ಪ್ರದೇಶದ ಸೇರಿದಂತೆ ಉತ್ತರ ಭಾರತ ನೈಸರ್ಗಿಕ ವಿಕೋಪದಿಂದ (natural disaster) ತತ್ತರಿಸಿದೆ. ಒಂದೇಸ ಸಮ ಮಳೆ ಸುರಿಯುತ್ತಿರುವುದರಿಂದ ನದಿಗಳು ಉಕ್ಕಿ ಹರಿಯುತ್ತಿದ್ದು ಹಲವಾರು ಕಡೆಗಳಲ್ಲಿ ಪ್ರವಾಹದ ಸ್ಥಿತಿ ಎದುರಾಗಿದೆ. ಹಿಮಾಚಲದ ಶಿಮ್ಲಾ (Shimla), ಮನಿಲಾ (Manila) ಮೊದಲಾದ ನಗರಗಳಲ್ಲಿ ಪ್ರವಾಹದಿಂದ ಆನಾಹುತಗಳು ಸಂಭವಿಸುತ್ತಿದ್ದು ಈಗಾಗಲೇ 17 ಜನ ಬಲಿಯಾಗಿದ್ದಾರೆ. ಕಾರುಗಳು ಕೊಚ್ಚಿಕೊಂಡು ಹೋಗಿವೆ ಮತ್ತು ಕಟ್ಟಡಗಳು ಇಸ್ಪೀಟ್ ಎಲೆಗಳಂತೆ (pack of cards) ಕುಸಿದು ಬೀಳುತ್ತಿವೆ. ಈ ವಿಡಿಯೋದಲ್ಲಿ ನದಿ ದಡಕ್ಕಿರುವ ಒಂದು ಹೋಟೆಲ್ ಅನಾಮತ್ತಾಗಿ ನದಿಯಲ್ಲಿ ಕುಸಿದು ಬೀಳಿತ್ತಿರುವುದನ್ನು ನೋಡಬಹುದು. ಮೇಲ್ನೋಟಕ್ಕೆ ಹೋಟೆಲ್ ಕಟ್ಟಡ ಸಶಕ್ತವಾಗೇ ಕಾಣುತ್ತದೆ. ಆದರೆ ನೀರಿನ ಅಬ್ಬರ ಇಂಥ ಕಟ್ಟಡವನನ್ನೂ ಉರುಳಿಸುತ್ತದೆ ಅಂದರೆ ಪ್ರವಾಹದ ಸ್ಥಿತಿ ಹೇಗಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ